ರಾಮನಗರ: ಕನಕಪುರದಲ್ಲಿ ಶಿಕ್ಷಕರ ಕೊರತೆ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಶಿಕ್ಷಕರ ಕೊರತೆ ಇರೋದು ನಿಜ.ನನ್ನ ಕ್ಷೇತ್ರ ಅಲ್ಲ ಜಿಲ್ಲೆ, ರಾಜ್ಯದಲ್ಲೂ ಶಿಕ್ಷಕರ ಕೊರತೆ ಇದೆ. ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ನೇಮಕ ಆಗಬೇಕು.ಅದನ್ನ ಕೂತು ಚರ್ಚೆ ಮಾಡುತ್ತೇವೆ ಎಂದರು.
ನಗರದಲ್ಲಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಗೆ ನಮ್ಮದೇ ಆದ ಆಲೋಚನೆಗಳಿವೆ.ಅದನ್ನ ಜಾರಿ ಮಾಡಲು ಪರಿಶೀಲನೆ ಮಾಡ್ತಿದ್ದೇವೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಸಿಗಬೇಕು.ಸಣ್ಣಸಣ್ಣ ಶಾಲೆಗಳನ್ನ ಒಗ್ಗೂಡಿಸಿ ಪಬ್ಲಿಕ್ ಶಾಲೆ ಮಾದರಿ ಶಾಲೆಗಳ ನಿರ್ಮಾಣ ಆಗಬೇಕು.ಇದಕ್ಕೆ ಸಿಎಸ್ ಆರ್ ಫಂಡ್ ಹಾಗೂ ಸಂಘಸಂಸ್ಥೆಗಳ ಜೊತೆಗೂಡಿ ಯೋಜನೆ ಮಾಡ್ತೇವೆ ಎಂದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕನಕಪುರಕ್ಕೆ ಮೊದಲೇ ಮೆಡಿಕಲ್ ಕಾಲೇಜು ಮಂಜೂರಾಗಿತ್ತು.ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಜೆಟ್ ನಲ್ಲಿ ಘೋಷಣೆ ಮಾಡಿದ್ರು.ಎಸ್ಟಿಮೇಟ್, ಟೆಂಡರ್ ಆಗಿ ಎಲ್ಲಾ ಕೆಲಸ ಮುಗಿದಿತ್ತು.ಈಗ ಎರಡೂ ಕಡೆಗೂ ಮೆಡಿಕಲ್ ಕಾಲೇಜು ಅವಶ್ಯಕತೆ ಇದೆ. ಕನಕಪುರದಲ್ಲಿ ನಿರ್ಮಾಣ ಆಗ್ತಿರೊ ಕಾಲೇಜು ರಾಮನಗರಕ್ಕೆ ಸಮೀಪವೇ ಇದೆ.ಅಲ್ಲೂ ಕಾಲೇಜು ಮಾಡಬೇಕು, ಇಲ್ಲೂ ಕಾಲೇಜು ಮಾಡಬೇಕು ಎಂದರು.
ರಾಮನಗರದಲ್ಲಿ ಯೂರ್ನಿವರ್ಸಿಟಿ ಆಗುತ್ತೆ.ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಅಂತ ಇದೆ.ಅದನ್ನ ಕನಕಪುರದಲ್ಲಾದ್ರೂ ಮಾಡ್ತೀವಿ, ರಾಮನಗರದಲ್ಲಾದ್ರೂ ಮಾಡ್ತೀವಿ.ಮೆಡಿಕಲ್ ಕಾಲೇಜಿಗೆ ರಾಮನಗರದಲ್ಲೂ ಟೆಂಡರ್ ಆಗಿದೆ, ಕನಕಪುರದಲ್ಲೂ ಟೆಂಡರ್ ಆಗಿದೆ.
ನನ್ನ ಆದ್ಯತೆ ಮೊದಲು ರಾಮನಗರಕ್ಕೆ, ಕನಕಪುರಕ್ಕೆ ನಂತರ.ರಾಜಕೀಯಕ್ಕೆ ಬಂದ್ ಮಾಡ್ತಿದ್ದಾರೆ.
ಬಂದ್ ಮಾಡುವವರನ್ನ ಬೇಡ ಎನ್ನಲು ಆಗುತ್ತಾ.? ಎಂದು ಪ್ರಶ್ನೆ ಮಾಡಿದ್ದಾರೆ. ಹಾದಿಲಿ ಬೀದಿಲಿ ಮಾತನಾಡುವವರಿಗೆ ಉತ್ತರ ಕೊಡಲ್ಲ.ರಾಮನಗರದಲ್ಲಿ ಈಗಾಗಲೇ ದೊಡ್ಡ ಆಸ್ಪತ್ರೆ ಇದೆ.ರಾಮನಗರ, ಕನಕಪುರ ಎರಡೂ ಕಡೆ ರಾಜೀವ್ ಗಾಂಧಿ ವಿವಿಯ ಕಟ್ಟಡ ಇರಲಿದೆ.ಅವರಿಗೆ ಸಿಗಬೇಕಾದುದ್ದು ಅವರಿಗೆ ಸಿಗುತ್ತೆ, ನಮಗೆ ಸಿಗಬೇಕಾದುದ್ದು ನಮಗೆ ಸಿಗುತ್ತೆ.ಮೆಡಿಕಲ್ ಕಾಲೇಜು ಸ್ಥಳಾಂತರದ ಬಗ್ಗೆ ಅಡ್ಡಗೋಡೆಮೇಲೆ ದೀಪ ಇಟ್ಟಿದ್ದಾರೆ.
ಸೆ.7ಭಾರತ್ ಜೋಡೊ ಯಾತ್ರೆ ಒಂದು ವರ್ಷ ಪೂರ್ಣ ವಿಚಾರವಾಗಿ ಮಾತನಾಡಿ, ಭಾರತ್ ಜೋಡೊ ಸ್ಮರಣಾರ್ಥ ರಾಮನಗರದಲ್ಲಿ ಕಾಲ್ನಡಿಗೆ ಮಾಡಲಿದ್ದೇವೆ.ಸಿಎಂ ಸಿದ್ದರಾಮಯ್ಯ, ನಾನು ಹಾಗೂ ಕೆಲ ಸಚಿವರು ಒಂದು ಗಂಟೆಗಳ ಕಾಲ ನಡೆಯುತ್ತೇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಹಿನ್ನೆಲೆ ರಾಮನಗರದಲ್ಲಿ ಕಾಲ್ನಡಿಗೆ ಮಾಡುತ್ತೇವೆ.ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಕಾಲ್ನಡಿಗೆ ಮಾಡಬೇಕು. ರಾಮನಗರ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮ ಯಶಸ್ವಿ ಮಾಡಿ ಎಂದು ಹೇಳಿದ್ದಾರೆ.