State News

ಕಷ್ಟಪಟ್ಟು ದುಡಿದ ಹಣದಲ್ಲಿ ಜನರು ಬಿಬಿಎಂಪಿಗೆ ತೆರಿಗೆ ಕಟ್ತಾರೆ – ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ

ಬೆಂಗಳೂರು : ತೆರಿಗೆ ಕಟ್ಟೋದೇನಾದ್ರೂ ತಡವಾದ್ರೆ ಬಿಬಿಎಂಪಿ ಮುಲಾಜಿಲ್ಲದೇ ಪ್ರಾಪರ್ಟಿ ಸೀಜ್ ಮಾಡುತ್ತೆ. ಕಷ್ಟಪಟ್ಟು ದುಡಿದ ಹಣದಲ್ಲಿ ಜನರು ಬಿಬಿಎಂಪಿಗೆ ತೆರಿಗೆ ಕಟ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಹೇಳಿದ್ದಾರೆ.

ಜನರು ಪಾಲಿಕೆಗೆ ಕಟ್ಟಿರೋ ತೆರಿಗೆ ಹಣವನ್ನು ಹೇಗೆ ಹಾಳು ಮಾಡ್ತಿದೆ ಗೊತ್ತಾ? ಕಾಮಗಾರಿ ಮುಗಿದು 2 ವರ್ಷಗಳಾದ್ರೂ ಇಲ್ಲ ಲೋಕಾರ್ಪಣೆ ಭಾಗ್ಯ ಇಲ್ಲವಾಯಿತು. ಬರೊಬ್ಬರಿ 80 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಹಾಟ್‌ಸ್ಪಾಟ್ ಮಾಡಲಾಗಿದ್ದು, ಗಾಂಧಿನಗರದಲ್ಲಿರೋ ಫ್ರೀಡಂ ಪಾರ್ಕ್ ಅನ್ನು ನವೀಕರಣಗೊಳಿಸಲಾಗಿದೆ. 2017ರಲ್ಲಿ ಆರಂಭವಾದ ಕಾಮಗಾರಿ, 2022ರಲ್ಲೇ ಮುಗಿದು ಹೋಗಿದೆ.

ಪಾಳು ಬಿದ್ದ ಸ್ಥಿತಿಯಲ್ಲಿದ್ದ 2 ಎಕರೆ ಜಾಗದಲ್ಲಿ 10 ಸಾವಿರ ಜನರ ಸೇರೋವಷ್ಟು ದೊಡ್ಡ ಹಾಲ್ ನಿರ್ಮಿಸಲಾಗಿದೆ. ಮಹಡಿಯ ಕೆಳಗೆ 500 ಕಾರ್ ಹಾಗು 500 ಟೂ ವೀಲರ್ ನಿಲ್ಲಿಸೋವಷ್ಟು ದೊಡ್ಡ ಮಲ್ಟಿ ಲೆವರ್ ಕಾರ್ ಪಾರ್ಕಿಂಗ್‌ಗಳನ್ನೂ ಕಟ್ಟಲಾಗಿದೆ. ಸಾವಿರಾರು ಜನರು ಬರೋ ನಿರೀಕ್ಷೆಯನ್ನು ಹೊತ್ತು ಬರೊಬ್ಬರಿ 30ರಿಂದ 40 ಶೌಚಾಲಯಗಳು ಇವೆ.

ಸುಸಜ್ಜಿತವಾದ ಲಿಫ್ಟ್, ಬೆಳಕಿಗಾಗಿ ನೂರಾರು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ಎಕರೆ ಮೇಲ್ಚಾವಣೆ ಮೇಲೆ 500 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸೋ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದ್ದು, ಇಷ್ಟೆಲ್ಲಾ ಇದ್ರೂ ಕೂಡ ಲೋಕಾರ್ಪಣೆ ಆಗದೇ, ಮತ್ತೆ ಹಾಳಾಗುವತ್ತ ಹೆಜ್ಜೆ ಹಾಕ್ತಿದೆ.

ಅಧಿಕಾರಿಗಳನ್ನ ಕೇಳಿದ್ರೆ ಬಾರಿ ಟೆಂಡರ್ ಫೈನಲ್ ಆಗಿಯೇ ಆಗುತ್ತೆ ಬಿಬಿಎಂಪಿ ಚೀಫ್ ಎಂಜಿನಿಯರ್ ಉತ್ತರ ನೀಡಿದ್ದಾರೆ. ಜನರ ತೆರಿಗೆ ಹಣದಲ್ಲಿ ಇಷ್ಟು ಅದ್ಭುತವಾಗಿ ಕಟ್ಟಿರೋ ಈ ಫ್ರೀಡಂ ಪಾರ್ಕ್‌ ಎಂಎಲ್‌ಸಿಪಿಯನ್ನುಈ ರೀತಿ ಹಾಳಾಗೋಕೆ ಬಿಡೋದು ಸೂಕ್ತವಲ್ಲ. ಉಗ್ರ ಹೋರಾಟ ಮಾಡ್ತಿವಿ ಸಾಮಾಜಿಕ ಕಾರ್ಯಕರ್ತ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!