State News

ಎರಡೇ ತಿಂಗಳಲ್ಲಿ 200 ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿದ ಪಾಪಿಗಳು

ಬೆಂಗಳೂರು: ಸಮಯದಲ್ಲಿ ಯಾವುದೇ ಲಿಂಗ ತಾರತಮ್ಯ ಇರಬಾರದು ಅಂತ ಸರ್ಕಾರ ಕಾನೂನು ಮಾಡಿದೆ. ಅಲ್ಲದೆ ಡಿಲವರಿಗೂ ಮೊದಲೇ ಭ್ರೂಣ ಪತ್ತೆ ಮಾಡೋದು ಅಪರಾದ ಅಂತ ಖಡಕ್ ಎಚ್ಚರಿಕೆ ಕೊಟ್ಟಿದೆ. ಇಷ್ಟಾದರೂ ಕೂಡ ಹಣದ ಆಸೆಗಾಗಿ ಇಂತಹ ಪಾಪದ ಕೆಲಸ ಮಾಡುತ್ತಿದ್ದ ಟೀಂನ್ನ ಬೈಯಪ್ಪನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹೌದು ಹೀಗೆ ಪೋಟೋ ದಲ್ಲಿ ಕಾಣುವ ಇವರೆಲ್ಲ ಮಾಡಿರೋ ಕೆಲಸದ ಬಗ್ಗೆ ನಿಮಗೆ ಗೊತ್ತಾದ್ರೆ ಛೀ, ಥೂ ಅಂತ್ತಿರಾ.ಹಣದ ಆಸೆಗಾಗಿ ಗರ್ಭಿಣಿ ಮಹಿಳೆಯರನ್ನ ಟಾರ್ಗೇಟ್ ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡುತ್ತಿದ್ದ ಹೇಸಿಗೆ ತಿನ್ನೋ ಕೆಲಸ ಮಾಡುತ್ತಿದ್ದರು.ಬೆಂಗಳೂರಿನಿಂದ ಮಂಡ್ಯಕ್ಕೆ ಕರೆದುಕೊಂಡು ಹೋಗಿ ಯಾವುದೇ ಹೈಜನಿಕ್ ಇಲ್ಲದ ಆಲೆಮನೆಯಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದರು. ಇಂತಹ ಖದೀಮರು ಬೈಯಪ್ಪನಹಳ್ಳಿ ಯಿಂದ ಹೊರಡುವಾಗ ಲಾಕ್ ಮಾಡಿದ ಪೋಲಿಸರು ಆರೋಪಿಗಳ ಹೆಡೆಮುರಿ‌ಕಟ್ಟಿದ್ದಾರೆ

ಬೆಂಗಳೂರಿನಿಂದ ಭ್ರೂಣ ಪತ್ತೆ ಮಾಡೋದಕ್ಕೆ ಸೆಲೆಕ್ಟ್ ಮಾಡಿಕೊಂಡಿದ್ದು ಮೈಸೂರಿನ ಉದಯಗಿರಿಯಲ್ಲಿರುವ ಮಾತಾ ಆಸ್ಪತ್ರೆ, ಹಾಗೂ ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಫೈಲ್ಸ್ ಡೇ ಕೇರ್ ಸೆಂಟರ್ ನ್ನ .ಇಲ್ಲಿ ಚೆನ್ನೈ ಮೂಲದ ಡಾ ತುಳಸಿರಾಮ್, ಡಾ. ಚಂದನ್ ಬಲ್ಲಾಳ್ ಇವನ ಹೆಂಡತಿ ಡಾ ಮೀನಾ ಇವರ ಜೊತೆ ಖಾಸಗಿ ಆಸ್ಪತ್ರೆ ರಿಸ್ಪನ್ಷಿಟ್ ರೀಜ್ಮಾ ಲ್ಯಾಬ್ ಟೆಕ್ನಿಷಿಯನ್ ನಿಸ್ಸಾರ್ ಒಂಭತ್ತು ಜನರ ಸಿಂಡಿಕೇಟ್ ಟೀಂ ಮಾಡಿಕೊಂಡು ಇಂತಹ ಪಾಪಾದ ಕೆಲಸ ಮಾಡುತ್ತಿದ್ರು.

ಕಳೆದ ಎರಡು ವರ್ಷಗಳಲ್ಲಿ ಸುಮಾರು 900 ಭ್ರೂಣ ಹತ್ಯೆ ಮಾಡಿರೋದಾಗಿ ಹಾಗೂ ತಿಂಗಳಿಗೆ 20 ರಿಂದ 25 ಸ್ಕ್ಯಾನ್ ಮಾಡ್ತಿದ್ರಂತೆ . ಇದರಲ್ಲಿ ಭಾಗಿಯಾಗಿದ್ದ ಅಸಾಮಿಗಳು ಹುಬ್ಬಳ್ಳಿ, ಬೆಂಗಳೂರು, ಸೇರಿದಂತೆ ಅನೇಕ ಕಡೆಗಳಲ್ಲಿ ನೆಟ್ವರ್ಕ್ ಆಗಿ ಕೆಲಸ ಮಾಡ್ತಿದ್ರಂತೆ.

ಈಗಾಗಲೇ ಪೋಲಿಸರು ಆರೋಪಿಗಳ ಜಾಲವನ್ನು ಭೇದಿಸಿ ತನಿಖೆ ನಡೆಸುತ್ತಿದ್ದಾರೆ, ಅವರ ಬ್ಯಾಂಕ್ ಡಿಟೈಲ್ಸ್, ಕಾಲ್ ಡಿಟೈಲ್ಸ್ ‌ವಾಟ್ಸ್ ಪ್ ನ್ನ ಪರಿಶೀಲನೆ ನಡೆಸುತ್ತಿದ್ದಾರೆ ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೋ ಅನ್ನೋದರ ಸಂಪೂರ್ಣ ಮಾಹಿತ ಕಲೆಕ್ಟ್ ಮಾಡಿ ತಕ್ಕ‌ ಶಿಕ್ಷೆ ಕೊಡಿಸಬೇಕು ಮತ್ತೆ ಇಂತಹ ಪ್ರಕರಣ ಗಳು ಮರುಕಳಸಿದಿರಲಿ ಅನ್ನೋದೆ ನಮ್ಮ ಆಶಯ..

ವರದಿ: ನ್ಯಾನಪ್ಪನಹಳ್ಳಿ ಆರ್ ವೆಂಕಟೇಶ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!