State News

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ದಿನದಂದು ರಾಜ್ಯದ ದೇವಾಲಯಗಳಲ್ಲಿ ವಿಷೇಶ ಪೂಜೆ- ರಾಮಲಿಂಗಾರೆಡ್ಡಿ

ಬೆಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನಲೆ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುವುದಕ್ಕೆ ಆದೇಶ ಹೊರಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ನಗರದ ಜಯನಗರದಲ್ಲಿ ಮಾತನಾಡಿದ ಅವರು 22 ಕ್ಕೆ ಹೊಸ ದೇವಾಲಯ ಉದ್ಘಾಟನೆ ಆಗ್ತಿದೆ. ಅಂದು ವಿಶೇಷ ಪೂಜೆ ಮಾಡಿ ಆದೇಶ ಹೊರಡಿಸುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಆಯುಕ್ತರು ಆದೇಶ ಹೊರಡಿಸ್ತಾರೆ. ರಾಜ್ಯದಲ್ಲಿ ಸಾಕಷ್ಟು ಶ್ರೀರಾಮ ದೇವಾಲಯಗಳು ಇದಾವೆ. ಯುಗಾದಿ , ಸಂಕ್ರಾಂತಿ ಸೇರಿದಂತೆ ಬೇರೆ ಬೇರೆ ಹಬ್ಬಗಳಲ್ಲೂ ವಿಶೇಷ ಪೂಜೆ ಆಗುತ್ತದೆ. ನಾವು ಎಂದೂ ಧರ್ಮವನ್ನ ರಾಜಕೀಯವಾಗಿ ಬಳಸಿಕೊಂಡಿಲ್ಲ.ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ತಾರೆ. 16 ಕೇಸ್ ಕರ ಸೇವಕನ ಮೇಲಿವೆ. ನನ್ನ ಮೇಲೂ ಕೇಸಿವೆ , ಸಿದ್ದರಾಮಯ್ಯ, ಶಿವಕುಮಾರ್ ಮೇಲೂ ಕೇಸಿವೆ. ಬಿಜೆಪಿಯವರಿಗೆ ಕಾನೂನಿನ ಅರಿವಿಲ್ಲ ಎಂದು ಕಿಡಿ ಕಾರಿದರು.

ಹುಂಡಿಗೆ ಹಣ ಹಾಕಬೇಡಿ ಎಂಬ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿ 140 ಕೋಟಿ ಜನ ಇದಾರೆ, ಯಾರೋ ಒಬ್ಬರು ಹೇಳಿದ ಮಾತು ಕೇಳ್ತಾರಾ..? ಜನ ಹುಂಡಿಗೆ ಕಾಸು ಹಾಕೋದು ನಿಲ್ಲಿಸ್ತಾರಾ..? ಹೊಸ ಶ್ರೀರಾಮನ ದೇವಾಲಯ ಉದ್ಘಾಟನಾ ಕೆಲಸ ಶುಭವಾಗಲಿ ಎಂದರು. ಸಿದ್ದರಾಮಯ್ಯ- ಶಿವಕುಮಾರ್ ರಿಂದ ಕಾಂಗ್ರೆಸ್ ಪತನ ಎಂಬ ಗೌಡರ ಹೇಳಿಕೆ ವಿಚಾರವಾಗಿ ಮಾತನಾಡಿ 135 ವರ್ಷಗಳ ಇತಿಹಾಸ ಕಾಂಗ್ರೆಸ್ ಗಿದೆ. ಮೇಲಿರುವವರು ಕೆಳಗೆ ಬರಬೇಕು. ಜನರ ಹಿತ ದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಸುಮ್ಮನೆ ಬಡಾಯಿ ಕೊಚ್ಚಿಕೊಳ್ತಾರೆ. ಇನ್ನೂ ರಾಮಮಂದಿರದ ಉದ್ಘಾಟನೆಗೆ ಆಹ್ವಾನ ಬಂದಿದೆಯಾ ಎಂಬ ವಿಚಾರವಾಗಿ ಮಾತನಾಡಿದ ಅವರು ನನಗೆ ದೇವಾಲಯ ಉದ್ಘಾಟನೆಗೆ ಆಹ್ವಾನ ಬಂದಿಲ್ಲ. ಸೋನಿಯಾ ಗಾಂಧಿಯವರಿಗೆ ಆಹ್ವಾನ ಬಂದಿದೆ ಎಂದು ಹೇಳಿದರು.

ವರದಿ : ಬಸವರಾಜ ಹೂಗಾರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!