ಬೆಂಗಳೂರು : ಪ್ರಯಾಣಿಕರಿಗೆ ಗಣೇಶ-ಗೌರಿ ಹಬ್ಬದ ಅಂಗವಾಗಿ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಸಂಸ್ಥೆಯು ರಾಜ್ಯದ ನಾನಾ ಕಡೆಗಳಿಗೆ ಹೆಚ್ಚುವರಿ ರೈಲು ಸೇವೆಯನ್ನು ಕಲ್ಪಿಸಿಕೊಡಲು ಮುಂದಾಗಿದೆ. ರಾಜ್ಯದ ಹಲವು ಕಡೆ ಬರುವ ರೈಲುಗಳಿಗೆ ಹೆಚ್ಚುವರಿ ಬೋಗಿಯನ್ನು ಫಿಕ್ಸ್ ಮಾಡಲು ರೈಲ್ವೆ ಸಂಸ್ಥೆ ಮುಂದಾಗಿದೆ.
ಗಣೇಶ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಭಾರತೀಯ ರೈಲ್ವೆ ಸಂಸ್ಥೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ನೈಋುತ್ಯ ರೈಲ್ವೇ ಇಲಾಖೆ ಮಹಾ ಪ್ರಬಂಧಕರು ಯಶವಂತಪುರದಿಂದ ಬೆಳಗಾವಿಗೆ ಮತ್ತು ಬೆಳಗಾವಿಯಿಂದ ಯಶವಂತಪುರಕ್ಕೆ ವಿಶೇಷ ರೈಲು ಸೇವೆ ಕಲ್ಪಿಸಲು ಆದೇಶಿಸಿದ್ದಾರೆ.
ಬೆಳಗಾವಿಯಿಂದ ಯಶವಂತಪುರಕ್ಕೆ ಮತ್ತು ಯಶವಂತಪುರದಿಂದ ಬೆಳಗಾವಿಯಗೆ ವಿಶೇಷ ರೈಲು ಸೇವೆ ಕಲ್ಪಿಸಿಲಾಗಿದ್ದು, ಎಷ್ಟು ಬೋಗಿಗಳು ಮತ್ತು ಯಾವ ಅವಧಿಯಲ್ಲಿ ಇರುತ್ತದೆ.
- ಸೆ.15ರಂದು ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಸೆ.16ರ ಬೆಳಗ್ಗೆ 6 ಗಂಟೆಗೆ ಬೆಳಗಾವಿ ತಲುಪಲಿದೆ.
- ಸೆ.16ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು 17ರಂದು ಬೆಳಗ್ಗೆ 4.30ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
- ಸೆ.17ರಂದು ಸಂಜೆ 6.15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು 18ರಂದು ಬೆಳಗ್ಗೆ 6 ಗಂಟೆಗೆ ಬೆಳಗಾವಿ ತಲುಪಲಿದೆ.
- ಸೆ.18ರ ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು 19 ರಂದು ಬೆಳಗ್ಗೆ 4.30ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೋಗುವ ಪ್ರಯಾಣಿಕರಿಗಾಗಿ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಒದಗಿಸಲಾಗಿದ್ದು, ಎಷ್ಟು ಬೋಗಿಗಳು ಮತ್ತು ಯಾವ ಅವಧಿಯಲ್ಲಿ ಇರುತ್ತದೆ. ಎಸ್.ಎಸ್.ಎಸ್ ಹುಬ್ಬಳ್ಳಿ-ಕೆ.ಎಸ್.ಆರ್ ಬೆಂಗಳೂರು ವಿಶೇಷ ಡೈಲಿ ಎಕ್ಸ್ಪ್ರೆಸ್: ಮೂರು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳು ಇದು ಸೆಪ್ಟೆಂಬರ್ 14ರಿಂದ 19ರವರೆಗೆ ಈ ಸೇವೆ ಲಭ್ಯವಾಗಿದೆ.
- ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ವಿಶೇಷ ಡೈಲಿ ಎಕ್ಸ್ಪ್ರೆಸ್: ಮೂರು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳು ಸೆಪ್ಟೆಂಬರ್ 15ರಿಂದ ಸೆ.20ರವರೆಗೆ ಇದೆ.
- ಕೆ.ಎಸ್.ಆರ್ ಬೆಂಗಳೂರು- ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್: ಮೂರು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳು ಸೆಪ್ಟೆಂಬರ್ 15ರಿಂದ 18ರವರೆಗೆ ಇದೆ.
- ಎಸ್.ಎಸ್.ಎಸ್ ಹುಬ್ಬಳ್ಳಿ-ಕೆ.ಎಸ್.ಆರ್ ಬೆಂಗಳೂರು ಡೈಲಿ ಎಕ್ಸ್ಪ್ರೆಸ್: ಒಂದು ಹೆಚ್ಚುವರಿ ನಾನ್-ಎಸಿ ಚೇರ್ ಕಾರ್ ಬೋಗಿಗಳು ಸೆಪ್ಟೆಂಬರ್ 15ರಿಂದ 18ರವರೆಗೆ ಇದೆ.
- ಯಶವಂತಪುರ-ವಾಸ್ಕೋ-ಡ-ಗಾಮಾ ಡೈಲಿ ಎಕ್ಸ್ಪ್ರೆಸ್: ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿ ಜೋಡಣೆಯಾಗಿದ್ದು, ಸೆಪ್ಟೆಂಬರ್ 14ರಿಂದ ಅಕ್ಟೋಬರ್ 5ರವರೆಗೆ ಇದೆ.
- ವಾಸ್ಕೋ-ಡ-ಗಾಮಾ-ಯಶವಂತಪುರ ಡೈಲಿ ಎಕ್ಸ್ಪ್ರೆಸ್: ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿಗಳು ಸೆಪ್ಟೆಂಬರ್ 13ರಿಂದ ಅಕ್ಟೋಬರ್ 4ರವರೆಗೆ ಇದೆ.