ಬೆಂಗಳೂರು : ಮೌಲ್ವಿ ತನ್ವೀರ್ ಹಾಶ್ಮಿಗೆ ಐಸಿಸ್ ಉಗ್ರರ ನಂಟು ಇದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಇಬ್ರಾಹಿಂ, ಧಾರ್ಮಿಕ ಗುರುಗಳಿಗೆ ಸೂಫಿ ಸಂತರು ಅವರು. ಯತ್ನಾಳ್ ಕುಟುಂಬ ಈಗಲೂ ದರ್ಗಾಕ್ಕೆ ಹೋಗುತ್ತದೆ.
ಕೇವಲ ಓಟಿನ ರಾಜಕಾರಣಕ್ಕೆ ಧರ್ಮವನ್ನ ಟಾಗ್ರೆಟ್ ಮಾಡುತ್ತಿದ್ದಾರೆ ಎಂದರು. ಯತ್ನಾಳ್ ಅವರೇ.. ಜನರ ಸಮಸ್ಯೆ ಬಗ್ಗೆ, ಶೈಕ್ಷಣಿಕ, ಆರೋಗ್ಯದ ಬಗ್ಗೆ ಮಾತಾಡಲು ವಿಷಯಗಳಿವೆ. ನೀವು ನಿಮ್ಮ ಪಾಡಿಗೆ ಕೆಲಸ ಮಾಡಿ. ನಾವು ನಮ್ಮ ಕೆಲಸ ಮಾಡುತ್ತಾ ಹೋಗುತ್ತೇವೆ ಎಂದರು.
ಪಕ್ಷದಿಂದ ಉಚ್ಚಾಟನೆ ಮಾಡುವವರು ಯಾರು? ಅವರಿಗೆ ಜನವೇ ಇಲ್ಲ. ನಾನು ಮೂರು ವರ್ಷದ ಅಧ್ಯಕ್ಷ. ಜನತಾದಳದ ಮತದಾರರು ಆರಿಸಿ ಬಂದು ಅವರು ಡಿಕ್ಲರ್ ಮಾಡಿರುವ ಸರ್ಟಿಫಿಕೇಟ್ ಇದೆ. ಇವತ್ತು ಡಿಸಾಲ್ವ್ ಮಾಡಿದ್ದೇವೆ ಅಂತ ಹೇಳಿದ್ದಾರೆ. ಡಿ.9 ರಂದು ಸಭೆ ಕರೆದಿದ್ದಾರೆ. 12 ಶಾಸಕರನ್ನ ಕೂರಿಸಿ ಜನವರಿಯಲ್ಲಿ ಮಾತಾಡಿಸುತ್ತೇನೆ. ಯಾರ ಸಭೆಗೆ ಎಷ್ಟು ಮಂದಿ ಬರುತ್ತಾರೆ ಎಂದು ನೋಡಿ ಎಂದರು.