ಹೊಸ ಮದ್ಯದಂಗಡಿ ತೆರೆಯುವ ಪ್ರಸ್ತಾಪ ಇಲ್ಲ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ. ಹೊಸದಾಗಿ ಮದ್ಯಂಗಡಿ ತೆರೆಯುವ ವಿಚಾರವಾಗಿ ಮಾತನಾಡಿದ ಅವರು ಹೊಸದಾಗಿ ಮದ್ಯದ ಅಂಗಡಿಗಳನ್ನು ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಬೊಮ್ಮಾಯಿಯವರೇ ಸರಾಯಿ ಅಂಗಡಿಗಳನ್ನು ಅವರೇ ಕೊಟ್ಟಿದ್ದಾರೆ. ಸರಾಯಿ ಅಂಗಡಿಗಳನ್ನು ಕೊಡ್ತೀವಿ ಅಂತ ನಾವೆನಾದ್ರೂ ಹೇಳಿದ್ದೀವಾ..? ಬೊಮ್ಮಾಯಿಯವರೇ ಮದ್ಯದಂಗಡಿಗೆ ಅನುಮತಿ ಕೊಟ್ಟ ಈತರಾ ಅವರೇ ಮಾತನಾಡೋದು. ಕೊಟ್ಟರೆ ಅನ್ಯಾಯ ಆಗ್ತದೆ ಅಂತ ಅವರೇ ಹೇಳೋದು.
ಸರ್ಕಾರ ಇನ್ನೂ ನಿರ್ಧಾರವೇ ತೆಗೆದುಕೊಂಡಿಲ್ಲ, ಆಗಲೇ ವಿಪಕ್ಷ ಜನರ ದಾರಿ ತಪ್ಪಿಸುತ್ತಿದೆ. ಹೆಣ್ಣುಮಕ್ಕಳಿಗೆ ಪಾಪ ವಿಪಕ್ಷದವರೇ ತಪ್ಪು ತಿಳುವಳಿಕೆ ಕೊಡ್ತಿದ್ದಾರೆ. ಇದು ಬಹಳ ತಪ್ಪು. ಯಾರು ಹೇಳಿದ್ದಾರೆ ಸಾರಾಯಿ ಅಂಗಡಿಗೆ ಅನುಮತಿ ಕೊಡ್ತೀವಿ ಅಂತ. ನಾನು ಹೇಳಿದ್ದೀನಾ, ಸಿಎಂ ಹೇಳಿದ್ದಾರಾ, ಡಿಸಿಎಂ ಹೇಳಿದ್ದಾರಾ..? ಅನುಮತಿ ಕೊಟ್ಟೇ ಬಿಟ್ಟಿದ್ದೀವಿ ಎನ್ನೋ ತರಹ ಮಾತನಾಡ್ತಿದ್ದಾರೆ.
ಹಳ್ಳಿಗಾಡಿನಲ್ಲಿ ಎಂಎಸ್ ಐ ಎಲ್ ನಿಂದ ತೆಗೆದುಕೊಂಡು ಹೋಗಿ ಹೆಚ್ಚಿನ ಬೆಲೆಗೆ ಮಾರ್ತಿದ್ದಾರೆ. ಇದನ್ನು ಕಂಟ್ರೋಲ್ ಮಾಡುವುದಕ್ಕೆ ಹೇಗೆ ಅಂತ ಯೋಚನೆ ಮಾಡ್ತಿದ್ದೇವೆ. ಒಂದು ಭಾಗ್ಯ ಕೊಡ್ತು ಇನ್ನೊಂದು ಭಾಗ್ಯ ಕಿತ್ತುಕೊಳ್ತು ಅಂತ ಮಾತನಾಡ್ತೀದ್ದಾರೆ. ವಿರೋಧ ಪಕ್ಷದವರಿಗೆ ಮಾಡುವುದಕ್ಕೆ ಬೇರೆ ಕೆಲಸಗಳಿವೆ ಅವುಗಳನ್ನ ಮಾಡಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ : ಬಸವರಾಜ ಹೂಗಾರ