ಬೆಂಗಳೂರು: ಐಟಿ ರೈಡ್ ವಿಚಾರದಲ್ಲಿ ಬಿಜೆಪಿ ಪ್ರತಿಭಟನೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಯಾರು ಅಥಾರಿಟಿ ಯಾರು ಪ್ರೂವ್ ಮಾಡಬೇಕು?ಐಟಿ ಸೆಂಟ್ರಲ್ ದ್ದು, ಐಟಿ ಇಲಾಖೆ ರಾಜ್ಯದ್ದಲ್ಲ.ಯಾರ ದುಡ್ಡು ಏನು ಎಂದು ಅವರೇ ಪ್ರೂವ್ ಮಾಡಬೇಕು, ಆಮೇಲೆ ನೋಡಬೇಕಷ್ಟೆ. ರಾಜಕೀಯವಾದ ಆರೋಪ ಅಷ್ಟೆ ಇದು ಎಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಿಂದೆ ಡಿಕೆ ರವಿ ಕೇಸ್ ಏನಾಯ್ತು? ಗಣಪತಿ ಕೇಸ್ ಏನಾಯ್ತು? ಪರೇಶ್ ಮೆಸ್ತಾ ಕೇಸ್ ಏನಾಯ್ತು?ಒಂದು ವರ್ಷ ಓಡಿಸಿದ್ರು ಅದನ್ನ ಸಿಬಿಐ ತನಿಖೆ ಆದಮೇಲೆ ವ್ಯತಿರಿಕ್ತವಾದ ರಿಪೋರ್ಟ್ ಬಂತು.ಒಂದೇ ಒಂದು ಕೇಸ್ ನಿಂದ ನಮ್ಮ ಸರ್ಕಾರ ಬಿದ್ದೋಯ್ತು.ಪರೇಶ್ ಮೆಹ್ತಾ ಒಂದು ಕೇಸ್ ಗೆ ನಮ್ಮ ಸರ್ಕಾರವೇ ಬಿದ್ದೋಯ್ತು.ನಂತರ ಅವನು ಬಾವಿಗೆ ಬಿದ್ದು ಸಾವನ್ನಪ್ಪಿದ್ದು ಅಂತ ಗೊತ್ತಾಯ್ತು.ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದುಡ್ಡು ಬಹಳಷ್ಟಿದೆ. ಎಕರೆಗೆ 10-30-40 ಕೋಟಿ ಇದೆ.ನಮ್ಮ ಕಡೆಯಾದ್ರೆ 10-20 ಲಕ್ಷ ಎಕರೆಗೆ ಮಾರಾಟ ಮಾಡ್ತೀವಿ.
ಆದರೆ ಬೆಂಗಳೂರಿನಲ್ಲಿ ಹಾಗಲ್ಲ, ಎಕರೆಗೆ 40-50 ಕೋಟಿ ಇದೆ. ಈಗಲೇ ಮೊದಲ ರೇಡ್ ಆದವರು ನಮ್ಮದೇ ದುಡ್ಡು ಅಂತ ಒಪ್ಕೊಂಡಿದಾರೆ. ಇಂದು ರಾಜ್ಯಕ್ಕೆ ಆಗಮಿಸಲಿರುವ ರಣದೀಪ್ ಸಿಂಗ್ ಸುರ್ಜೇವಾಲ. ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾತ್ರಿ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ನಿಗಮ, ಮಂಡಳಿ ನೇಮಕ ಸಂಬಂಧ ಸಿಎಂ ಜೊತೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ ಎಂದರು.
ಮೈಸೂರಿಗೆ ಕೆಲವರು ಹೋಗಬೇಕು ಅಂತ ಮಾತನಾಡಿದ್ದೆವು. ದಸರಾ ನೋಡೋಕೆ ಬನ್ನಿ ಅಂತ ಅಲ್ಲಿನ ಶಾಸಕರೂ ಹೇಳ್ತಿದ್ದರು.ಕೆಲವು ನಮ್ಮ ಲೈಕ್ ಮೈಂಡೆಡ್ ಶಾಸಕರು ಹೋಗಬೇಕು ಅಂತ ಇತ್ತು. ನಮ್ಮನ್ನು ಎಲ್ಲಾದ್ರೂ ಟ್ರಿಪ್ ಕರೆದುಕೊಂಡು ಹೋಗಿ ಅಂತ ಕೆಲವರು ಹೇಳ್ತಿದ್ರು.ಹಾಗೆ ಸಮಾನ ಮನಸ್ಕರು ಹೋಗಬೇಕು ಅಂತ ಇತ್ತು. ಈಗ ದಸರಾ ಹಬ್ಬ ಬೇಡ ಅಂತ ಇದ್ದೇವೆ.ಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗ್ತೇವೆ ಎಂದರು.