ತುಮಕೂರು : ತುಮಕೂರಿನಿಂದ ಅಯೋಧ್ಯೆಗೆ ವಿಶೇಷ ರೈಲು ಇಂದು ಬೆಳಗಿನ ಜಾವ 5.50ಕ್ಕೆ ಹೊರಟಿದೆ. ತುಮಕೂರಿನಿಂದ ಅಯೋಧ್ಯಾ ಧಾಮ್ ಎಂಬ ನಾಮಫಲಕ ಹೊತ್ತ ರೈಲಿನಲ್ಲಿ ತುಮಕೂರಿನಿಂದ ಸುಮಾರು 250 ರಾಮಭಕ್ತರು ಪ್ರಯಾಣಿಸಿದ್ದಾರೆ.
ಕರಸೇವಕರು, ಮಹಿಳೆಯರು ಸೇರಿದಂತೆ 250 ಭಕ್ತರು ಪ್ರಯಾಣಿಸಿದ್ದಾರೆ. ರೇಲ್ವೆ ನಿಲ್ದಾಣದಲ್ಲಿ ಹಿಂದೂ ಕಾರ್ಯಕರ್ತರು ರಾಮಲಲ್ಲಾ ಗೆ ಪೂಜೆ ಮಾಡಿ, ಭಜನೆ ಹಾಡಿ, ಯಾತ್ರೆಗೆ ಹೊರಟು ನಿಂತ ರಾಮಭಕ್ತರಿಗೆ ಆರತಿ ಬೆಳಗಿಸಿ ಬೀಳ್ಕೊಟ್ಟಿದ್ದಾರೆ. ಫೆ.9 ರಂದು ಈ ರೈಲು ಅಯೋಧ್ಯೆಗೆ ತಲುಪಲಿದೆ.