ಬೆಳಗಾವಿ: ಬೆಳಗಾವಿ ಬಸ್ ನಿಲ್ದಾಣ ಮುಂಭಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಲೆ ಮೇಲೆ ದಿನಸಿ ಹೊತ್ತು ಹೊರಟ್ಟಿದ್ದ ವೃದ್ಧನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ ನ ಚಕ್ರದಡಿ ಬೈಕ್ ಸವಾರರು ಬಿದ್ದಿದ್ದಾರೆ.
ವೃದ್ದನ ಚೀಲಕ್ಕೆ ಬೈಕ್ ಮೇಲೆ ಕುಳಿತಿದ್ದ ಮಹಿಳೆ ಕೈ ಟಚ್ ಆಗಿ ಅಪಘಾತ ಸಂಭವಿಸಿದೆ. ಬಸ್ ನ ಚಕ್ರದಡಿ ಸಿಲುಕಿ ಮಹಿಳೆ ಸ್ಥಳದಲ್ಲೇ ಸಾವು, ಬೈಕ್ ಸವಾರ ಬದುಕುಳಿದಿದ್ದಾರೆ.
32 ವರ್ಷದ ವಿದ್ಯಾಶ್ರೀ ಮೃತ ದುರ್ದೈವಿ. ಈಕೆ ಧಾರವಾಡ ಮೂಲದವರು ಎಂದು ತಿಳಿದುಬಂದಿದೆ. ಮೃತ ವಿದ್ಯಾಶ್ರೀ ಸಂಬಂಧಿಕರ ಮನೆಗೆ ಬೈಕ್ ಮೇಲೆ ಬಂದಿದ್ದರು. ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.