ಬೆಂಗಳೂರು: ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ಯುವತಿಯೊಬ್ಬಳು ತನ್ನ ಪ್ರೀತಿಗೆ ಮನೆಯವರೇ ಅಡ್ಡಿಯಾದ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
20 ವರ್ಷದ ಸ್ನೇಹ ಆತ್ಮಹತ್ಯೆ ಮಾಡಕೊಂಡ ಯುವತಿ. ಇವರು ನೆಲಮಂಗಲ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದು, ಈ ವೇಳೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಪ್ರೀಯಕರ ಸಂತೋಷ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಇದಕ್ಕೆ ಮನೆಯವರು ವಿರೋಧ ಪಡಿಸಿದ ಹಿನ್ನಲೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆ ಹಿನ್ನೆಲೆ…!
ಆಗಸ್ಟ್ 16 ರಂದು ಕಾಲೇಜಿನಿಂದಲೇ ಸ್ನೇಹ, ಯುವಕನೊಂದಿಗೆ ಪರಾರಿಯಾಗಿದ್ದನು. ಈ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮೂರು ದಿನಗಳ ಬಳಿಕ ಜೋಡಿಯನ್ನು ಪೊಲೀಸರು ಮಂಡ್ಯದಲ್ಲಿ ಪತ್ತೆ ಹಚ್ಚಿದರು. ಆ ಬಳಿಕ ಯುವತಿ ಪೋಷಕರು ಸ್ನೇಹಳನ್ನು ನೆಲಮಂಗಲದಿಂದ ಅಜ್ಜಿ ಮನೆಗೆ ಕಳುಹಿಸಿದ್ದರು.