ವ್ಯಕ್ತಿಗತ ಆರೋಪ ಮಾಡಿದ್ದು ಸರಿಯಲ್ಲ. ಕಮಿಷನ್ ಆರೋಪ ಮಾಡಿದ ಕೆಂಪಣ್ಣ ( kempanna ) ಗುತ್ತಿಗೆದಾರನೇ ಅಲ್ಲ ಎಂದು ಗೋವಿಂದ ಕಾರಜೋಳ ( govinda karajola ) ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ನಿಂದ ‘ಪೇಸಿಎಂ ಅಭಿಯಾನ’ ವಿಚಾರವಾಗಿ ಕಾಂಗ್ರೆಸ್ ( congress ) ವಿರುದ್ಧ ಬಾಗಲಕೋಟೆಯಲ್ಲಿ ಕಾರಜೋಳ ಕಿಡಿಕಾರಿದ್ದಾರೆ. ಇಂತಹ ವ್ಯಕ್ತಿಗೆ ಕಮಿಷನ್ ಕೊಟ್ಟಿದ್ದೇನೆ ಅಂತಾ ಕೆಂಪಣ್ಣ ಹೇಳಲಿ. ತನಿಖಾ ಸಂಸ್ಥೆ ನೋಟಿಸ್ ಕೊಟ್ಟರೂ ಸಹ ಮಾಹಿತಿ ನೀಡಿಲ್ಲ. ದೆಹಲಿಯಿಂದಲೂ ತನಿಖೆಗೆ ಕರೆದರೂ ಕೆಂಪಣ್ಣ ಬರಲಿಲ್ಲ. ಕೆಂಪಣ್ಣ ದಾಖಲೆ ಕೊಡದೇ ಸುಳ್ಳು ಆರೋಪ ಮಾಡಿ ಹೋಗ್ತಾನೆ. ಕಾಂಗ್ರೆಸ್ಸಿಗರು ಕೆಂಪಣ್ಣನನ್ನ ಟೂಲ್ ಆಗಿ ಉಪಯೋಗಿಸಿಕೊಳ್ತಿದ್ದಾರೆ. ಇದನ್ನು ಓದಿ :- ಐಐಟಿ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆ – ಬೆಲ್ಲದ್ ಪರಿಶೀಲನೆ
ಮುಧೋಳ ಮತಕ್ಷೇತ್ರ ಬದಲಾವಣೆ ಪ್ರಶ್ನೆಯೇ ಇಲ್ಲ.
ಯಾರೂ ಊಹಾಪೋಹ ಹುಟ್ಟಿಸ್ತಾರೋ ನನಗೆ ಗೊತ್ತಿಲ್ಲ. ನನ್ನ ರಾಜಕೀಯ ತೀರ್ಮಾನ ವನ್ನ ನಮ್ಮ ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷ ನನ್ನನ್ನ ಎಲ್ಲಿ ಕೆಲಸಕ್ಕೆ ಹಚ್ಚಬೇಕು ಅನ್ನೋ ತೀರ್ಮಾನ ಮಾಡುತ್ತೆ. ನಾನು ಮುಧೋಳ ಬಿಟ್ಟು ಬೇರೆ ಎಲ್ಲೂ ಚುನಾವಣೆ ಎದುರಿಸೋದಿಲ್ಲ. ಪಕ್ಷಕ್ಕೆ ಕೆಲಸ ಮಾಡಿ ಅಂತ ಪಾರ್ಟಿ ಹೇಳಿದ್ರೂ ಅದಕ್ಕೆ ನಾನು ಸಿದ್ಧ. ನನ್ನ ಕೊನೆಯ ಉಸಿರು ಇರೋವರೆಗೂ ಮುಧೋಳ ನಂಟು ಇರುತ್ತೆ, ನಾನೆಲ್ಲೂ ಹೋಗೋದಿಲ್ಲ ಎಂದು ಹೇಳಿದ್ರು.
ಇದನ್ನು ಓದಿ :- ವೀರಶೈವ ಲಿಂಗಾಯಿತರನ್ನಒಡೆದವರು ಯಾರು..? – ಬಿ.ವೈ.ವಿಜಯೇಂದ್ರ ಪ್ರಶ್ನೆ