ಧರ್ಮ ದಂಗಲ್ ನ ಕರಿನೆರಳ ನಡುವೆಯೇ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯ ರಥೋತ್ಸವ ( subramanya rathosthava ) ಇಂದು ನಡೆಯಲಿದೆ. ಸಜ್ಜನ್ ರಾವ್ ಸರ್ಕಲ್ ( sajan rao circel ) ನಲ್ಲಿರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ಬೆಳಗ್ಗೆ ೧೧.೪೫ ಕ್ಕೆ ಬೆಳ್ಳಿ ರಥೋತ್ಸವ ಆರಂಭವಾಗಲಿದೆ.
ರಥೋತ್ಸವ ಹಾದು ಹೋಗುವ ಹಾದಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ರಥೋತ್ಸವ ಹಾದು ಹೋಗುವ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿಲ್ಲ. ವ್ಯಾಪಾರ ದಂಗಲ್ ನಡುವೆ ದೇವಸ್ಥಾನದ ಮುಂಭಾಗದ ರಸ್ತೆ, ಅಕ್ಕಪಕ್ಕದ ರಸ್ತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿಲ್ಲ. ಸಜ್ಜನ್ ರಾವ್ ಸರ್ಕಲ್ ನ ಮುಂಭಾಗದಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.
ವಿರೋಧದ ನಡುವೆ ದೇವಸ್ಥಾನದ ಬಳಿ ವ್ಯಾಪಾರಕ್ಕೆ ಮುಸ್ಲಿಂ ವ್ಯಾಪಾರಿಗಳು ರೆಡಿ ಮಾಡಿಕೊಂಡಿದ್ದಾರೆ.
ನಾವು ಪ್ರತೀ ವರ್ಷವೂ ಇಲ್ಲಿ ವ್ಯಾಪಾರ ಮಾಡ್ತೀವಿ. ಚೆನ್ನಾಗಿ ವ್ಯಾಪಾರ ಆಗ್ತಿತ್ತು. ಇಷ್ಟು ವರ್ಷ ಈ ರೀತಿ ಇರಲಿಲ್ಲ.
ಸುಮಾರು ಹದಿನೈದು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರ್ತಿದ್ದೀನಿ ಎಂದು ಮುಸ್ಲಿಂ ವ್ಯಾಪಾರಿ ಯೊಬ್ಬರು ತಿಳಿಸಿದ್ದಾರೆ. ಹತ್ತಕ್ಕೂ ಹೆಚ್ಚು ಜನ ವ್ಯಾಪಾರಿಗಳು ನಮ್ಮ ಸಮುದಾಯದವರು. ಇಷ್ಟು ವರ್ಷ ಈ ರೀತಿ ಧರ್ಮ ದಂಗಲ್ ಇರಲಿಲ್ಲ. ಈ ರೀತಿ ಆಗಿದೆ ಅಂತಾ ಇಲ್ಲಿಗೆ ಬಂದ ಮೇಲೆ ಗೊತ್ತಾಗ್ತಿದೆ. ಯಾರಾದ್ರೂ ಬಂದು ತಡೀತಾರೆ ಅಂತಾ ಭಯ ಇದೆ.
ಪೊಲೀಸರು ನೆರವು ಕೊಡ್ತಿದ್ದಾರೆ. ಈವರೆಗೂ ತೆರವುಗೊಳಿಸಬೇಡಿ ಅಂತ ಯಾರೂ ಹೇಳಿಲ್ಲ ಎಂದು ಮುಸ್ಲಿಂ ವ್ಯಾಪಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : – ಜಪಾನ್ ನಲ್ಲಿ ನಟಿ ರಮ್ಯಾ ಬರ್ತ್ ಡೇ ಆಚರಣೆ – ಫೋಟೋ ಹಂಚಿಕೊಂಡ ಮೋಹಕ ತಾರೆ