ನಾವು ಕೇಳುತ್ತಲೇ ಇದ್ದೇವೆ, ಆದರೆ ಬಿಜೆಪಿ ( bjp ) ಉತ್ತರಿಸುವ ಧೈರ್ಯ ತೋರುವುದೇ ಇಲ್ಲ, ಬಿಜೆಪಿಗೆ ದಮ್ಮು ತಾಕತ್ತು ಇದ್ದರೆ ಉತ್ತರಿಸಲಿ, ಬಿಜೆಪಿಗರು ಟಿಪ್ಪು ವೇಷ ಧರಿಸಿ ಪೋಸ್ ಕೊಟ್ಟಿದ್ದೇಕೆ?
ಟಿಪ್ಪುವನ್ನು ಹೊಗಳಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಪುಸ್ತಕ ಹೊರತಂದಿದ್ದೇಕೆ? ರಾಷ್ಟ್ರಪತಿ ಟಿಪ್ಪು ಹೋಗಳಿದ್ದೇಕೆ? ಎಂದು ಪ್ರಶ್ನೆ ಮಾಡಿದೆ. ಇದನ್ನೂ ಓದಿ :- ಕಾರ್ತಿಕ ಮಾಸದಿಂದ ಯುಗಾದಿಯವರೆಗೆ ಜನರಿಗೆ ತೊಂದರೆಯಾಗಲಿದೆ – ಕೋಡಿಮಠ ಸ್ವಾಮೀಜಿ ಭವಿಷ್ಯ
ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ. ಡಿ.ಕೆ ರವಿ ಪ್ರಕರಣ – ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ . ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ – ಸರ್ಕಾರಕ್ಕೆ ಸಂಬಂಧವಿಲ್ಲ ಪರೇಶ್ ಮೇಸ್ತಾ ಪ್ರಕರಣ – ಸಹಜ ಸಾವು. ಸುಳ್ಳು ಹೇಳಿದ್ದ ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು ಎಂದು ಹೇಳಿದೆ.
ಲಂಚ ಲಂಚ ಲಂಚ… #40percentsarkara ದಲ್ಲಿ ಎಲ್ಲೆಲ್ಲೂ ಲಂಚದ ಹಾವಳಿ. ಭ್ರಷ್ಟಾಚಾರದ ಮಹಾಪೋಷಕ ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದೆ ಜನಸಾಮಾನ್ಯರ ಪ್ರಾಣ ಹಿಂಡುತ್ತಿದ್ದಾರೆ. ಕಂದಾಯ ಭವನವು ‘ಸಂದಾಯ ಭವನ’ವಾಗಿರುವುದು ಬಿಜೆಪಿಯ ಸಾಧನೆಗಳಲ್ಲೊಂದು! #PayCM ಆಡಳಿತದಲ್ಲಿ ಹುಟ್ಟು, ಸಾವಿಗೂ ಲಂಚ ಕೊಡುವಂತಾಗಿದೆ ಎಂದು ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ :- ಬಾಲ್ಟಿಕ್ ಪೈಪ್ ಲೈನ್ ನಲ್ಲಿ ಅನಿಲ ಸೋರಿಕೆ-ಯುರೋಪ್ ರಾಷ್ಟ್ರಗಳ ಮೇಲೆ ರಷ್ಯಾ ಪರೋಕ್ಷ ಸಮರ – ಚಳಿಗಾಲದ ಭೀತಿಯಲ್ಲಿ ಹಲವು ರಾಷ್ಟ್ರಗಳು