ಸಮ್ಮಿಶ್ರ ಸರ್ಕಾರ ಬಂದರೂ ಮುಸ್ಲಿಮರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ( ZAMMER AHMED KHAN ) ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ( H.D KUMARASWAMY ) ಗೆ ಸವಾಲು ಹಾಕಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಜೆಡಿಎಸ್ ನೂರು ಸೀಟು ದಾಟಲ್ಲ. ಮತ್ತೆಲ್ಲಿಂದ ಮುಸ್ಲಿಮರನ್ನು ಸಿಎಂ ಮಾಡುತ್ತಾರೆ. ಸಮ್ಮಿಶ್ರ ಸರ್ಕಾರ ಆದರೂ ಮುಸ್ಲಿಮರನ್ನು ಸಿಎಂ ಮಾಡುತ್ತೇವೆ ಎಂದು ಘೋಷಣೆ ಮಾಡಲಿ. ಇದು ನನ್ನ ಒಪನ್ ಚಾಲೆಂಜ್. ಜೆಡಿಎಸ್ಗೆ 113 ಸೀಟ್ ಬರಲು ಸಾಧ್ಯನಾ? ಅವರು ಹಗಲು ಕನಸು ಕಾಣುತ್ತಿದ್ದಾರೆ. ಏನು ಯಾತ್ರೆ ಮಾಡಿದರೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ರು.
ಚಾಮರಾಜಪೇಟೆಯಲ್ಲಿ ಜಮೀರ್ ಸೋಲಿಸಲು ನಡೆಯುತ್ತಿರುವ ಪ್ರಯತ್ನದ ವಿಚಾರವಾಗಿ ಮಾತನಾಡಿ, ಚಾಮರಾಜಪೇಟೆಯಲ್ಲಿ 2018ರಲ್ಲಿ ಜಮೀರ್ ಗೆ ಕಷ್ಟ ಇದೆ ಎಂದಿದ್ದರು. ಆದರೆ, ಫಲಿತಾಂಶ ಏನಾಯ್ತು? 6000 ಮತಗಳ ಜಾಸ್ತಿ ಲೀಡ್ನಲ್ಲಿ ಗೆಲುವು ಸಾಧಿಸಿದ್ದೆ. ನನ್ನ ವಿರುದ್ಧ ಎಚ್ಡಿ ದೇವೇಗೌಡರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದರು. ಆದರೆ, ಕರ್ನಾಟಕದ ಮುಸ್ಲಿಮರಿಂದ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಬದಲಾಗಿ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರನ್ನು ನಿಲ್ಲಿಸಿ ಎಂದು ಸವಾಲು ಹಾಕಿದ್ದೆ. ಇಲ್ಲಾಂದ್ರೆ ರೇವಣ್ಣ ( REVANNA ) ಅಥವಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿ ಎಂದು ಹೇಳಿದ್ದೆ. ಆದರೆ ಫಲಿತಾಂಶ ಏನಾಯ್ತು? ಎಂದು ಪ್ರಶ್ನಿಸಿದರು.
ಯಾರು ಬೇಕಾದರೂ ಅಭ್ಯರ್ಥಿ ಹಾಕಲಿ. ಚಾಮರಾಜಪೇಟೆ ಮತದಾರರಿಗೆ ಜಮೀರ್ ಅಹ್ಮದ್ ಖಾನ್ ಮನೆ ಮಗ. ಮನೆ ಮಗನನ್ನು ಯಾರಾದರೂ ಬಿಟ್ಟುಕೊಡಲು ಸಾಧ್ಯವೇ? ಯಾರಾದರೂ ಬರಲಿ ಎಂದರು. 2004 ರಿಂದ ಪ್ರತಿ ಬಾರಿ ಓಟ್ ಹೆಚ್ಚಾಗ್ತಿದೆ, ಹೊರತು ಕಡಿಮೆಯಾಗ್ತಿಲ್ಲ. ಚಾಮರಾಜಪೇಟೆ ( CHAMARAJPETE )ಯಲ್ಲಿ ಯಾವ ಪಕ್ಷದವರು ಯಾರನ್ನಾದರೂ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲಿ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಬಂದವರು ಮೂವತ್ತು ಸಾವಿರ ಓಟ್ ದಾಟಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ : – ಗಡಿ ವಿವಾದ ಮಹಾರಾಷ್ಟ್ರದ್ದು ಪೊಲಿಟಿಕಲ್ ಗಿಮಿಕ್- ಸಚಿವ ಆರ್.ಅಶೋಕ್
ಸಿದ್ದರಾಮಯ್ಯ ಚಾಮರಾಜಪೇಟೆ ಅಳಿಯ!
ಸಿದ್ದರಾಮಯ್ಯ ( SIDDARAMAIAH ) ಚಾಮರಾಜಪೇಟೆ ಅಳಿಯ. ಮಗನನ್ನು ಇಷ್ಟಪಡುವ ರೀತಿಯಲ್ಲಿ ಅಳಿಯನನ್ನು ಇಷ್ಟ ಪಡುತ್ತಾರೆ. ಈವಾಗಲೂ ಸಿದ್ದರಾಮಯ್ಯ ಚಾಮರಾಜಪೇಟೆಯಿಂದಲೇ ಸ್ಪರ್ಧೆ ಮಾಡಲಿ ಎಂದು ಆಹ್ವಾನ ನೀಡುತ್ತಿದ್ದೇನೆ ಎಂದರು. ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾ ಖಾನ್ ಎಂದು ಸಿಟಿ ರವಿ ನಾಮಕರಣ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಗೆ ಸಿದ್ದರಾಮಯ್ಯ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ.ಅವರಿಗೆ ಕಾಣುವುದು ಕೇವಲ ಸಿದ್ದರಾಮಯ್ಯ. ಅಮಿತ್ ಶಾ, ಮೋದಿಗೆ ಎಲ್ಲರಿಗೆ ಸಿದ್ದರಾಮಯ್ಯ ಮೇಲೆ ಕಣ್ಣು ಎಂದು ಹೇಳಿದ್ರು.
ಇದನ್ನೂ ಓದಿ : – ಸಾಲ ಮನ್ನಾದಲ್ಲಿ ಬಿಜೆಪಿ ಸರ್ಕಾರ ಅಕ್ರಮ ನಡೆಸಿದೆ– ಬಿಎಸ್ ವೈ ವಿರುದ್ಧ ಹೆಚ್.ಡಿ ಕೆ ಗಂಭೀರ ಆರೋಪ