ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯದ ರೈತರು ಬೆಳೆ ಹಾನಿ ಅನುಭವಿಸಿದ್ದಾರೆ. ರಾಜ್ಯ ಬಿಜೆಪಿ ( BJP ) ದೊಡ್ಡದಾಗಿ ಪ್ರಚಾರ ಮಾಡುವ ವಿಮಾ ಯೋಜನೆಯಿಂದ ನಯಾಪೈಸೆ ರೈತರಿಗೆ ಸಿಕ್ಕಿಲ್ಲ. ಇದು ಪ್ರಧಾನಮಂತ್ರಿ ಧೋಖಾ ಯೋಜನೆ ಎಂದು ಕಾಂಗ್ರೆಸ್ ( CONGRESS ) ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.
ವಿಮಾ ಕಂಪೆನಿಗಳ ಜೇಬು ತುಂಬಿಸುವ ರೈತರಿಗೆ ಮಹಾ ದ್ರೋಹವೆಸಗಿದೆ. ಇದು ಡಬಲ್ ಎಂಜಿನ್ ಅಲ್ಲ ಟ್ರಬಲ್ ಎಂಜಿನ್ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ : – ಮೋದಿ ಆಧುನಿಕ ಭಸ್ಮಾಸುರ – ಕಾಂಗ್ರೆಸ್ ಮುಖಂಡ ಉಗ್ರಪ್ಪ ವ್ಯಂಗ್ಯ
ದಲಿತ, ಹಿಂದುಳಿದ ವರ್ಗಗಳ ಏಳಿಗೆ ನಿಮಗೆ ಇಷ್ಟವಿಲ್ಲವೇ @BSBommai ಅವರೇ?
ದಲಿತರ ಪಾಲಿನ ಹಣದಲ್ಲಿ ಕೇವಲ 15% ಮಾತ್ರ ಬಳಕೆ ಮಾಡಿ ಮಿಕ್ಕಿದ್ದನ್ನು 40% ಕಮಿಷನ್ ಲೆಕ್ಕದಲ್ಲಿ ನುಂಗಲಾಗಿದೆಯೇ?
ದಲಿತ ವಿರೋಧಿ @BJP4Karnataka ದಲಿತರ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದೆ.
ಇದು ಕೇಶವಕೃಪದ ಆಜ್ಞೆಯ ಪಾಲನೆಯೇ? pic.twitter.com/NgILR2aN8O
— Karnataka Congress (@INCKarnataka) December 2, 2022
ದಲಿತ, ಹಿಂದುಳಿದ ವರ್ಗಗಳ ಏಳಿಗೆ ನಿಮಗೆ ಇಷ್ಟವಿಲ್ಲವೇ ಸಿಎಂ ಬೊಮ್ಮಾಯಿ? ಎಂದು ಕಾಂಗ್ರೆಸ್
ಟ್ವೀಟ್ ಮೂಲಕ ಪ್ರಶ್ನಿಸಿದೆ. ದಲಿತರ ಪಾಲಿನ ಹಣದಲ್ಲಿ ಕೇವಲ 15% ಮಾತ್ರ ಬಳಕೆ ಮಾಡಿದ್ದೀರಿ
ಮಿಕ್ಕಿದ್ದನ್ನು 40% ಕಮಿಷನ್ ಲೆಕ್ಕದಲ್ಲಿ ನುಂಗಲಾಗಿದೆಯೇ? ಎಂದು ಪ್ರಶ್ನಿಸಿದೆ. ದಲಿತ ವಿರೋಧಿ ಬಿಜೆಪಿ ದಲಿತರ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದೆ. ಇದು ಕೇಶವಕೃಪದ ಆಜ್ಞೆಯ ಪಾಲನೆಯೇ? ಎಂದು ಪ್ರಶ್ನೆ ಮಾಡಿದೆ.
ಇದನ್ನೂ ಓದಿ : – ತಮಿಳು ಹಿರಿಯ ನಿರ್ಮಾಪಕ ಕೆ.ಮುರಳೀಧರನ್ ನಿಧನ