ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ( ashwath narayan ) ಮಾಜಿ ಪ್ರಧಾನಿ ದೇವೇಗೌಡರ ( devegowda ) ಆರೋಗ್ಯ ವಿಚಾರಿಸಿದ್ದಾರೆ.
ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾತನಾಡಿದ ಅವರು, ದೇವೇಗೌಡ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ನವೆಂಬರ್ 21 ರಂದು ವಿಧಾನಸೌಧದ ಮುಂಭಾಗ ಚಾಲನೆಯಾಗಲಿರುವ ಮೃತ್ತಿಕಾ ಸಂಗ್ರಹಣಾ ಅಭಿಯಾನದ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿದ್ದೇನೆ. ಇದನ್ನೂ ಓದಿ : – ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್
ಜೊತೆಗೆ ನವೆಂಬರ್ 11 ರ ಪ್ರತಿಮೆ ಲೋಕಾರ್ಪಣೆಗೆ ಆಗಮಿಸುವಂತೆಯು ಆಹ್ವಾನ ಕೊಟ್ಟಿದ್ದೇನೆ. ಇದಾದ ಬಳಿಕ ಮುಖ್ಯಮಂತ್ರಿಗಳು ಕೂಡ ಪ್ರತ್ಯೇಕವಾಗಿ ಆಹ್ವಾನವನ್ನು ಅವರಿಗೆ ನೀಡಲಿದ್ದಾರೆ. ದೇವೇಗೌಡರು ಕಾರ್ಯಕ್ರಮಗಳನ್ನು ನೋಡಿಕೊಂಡು ಬರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ರು.
ಇದನ್ನೂ ಓದಿ : – ಭೂತಕೋಲ ಹಿಂದೂ ಸಂಸ್ಕೃತಿಯಲ್ಲ – ನಟ ಚೇತನ್ ಹೇಳಿಕೆ