ಸಿಎಂ ತವರು ಜಿಲ್ಲೆಯಿಂದ ಕಾಂಗ್ರೆಸ್ ಗೆ ೫೧ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( D.K SHIVKUMAR ) ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಏನು ಗೊತ್ತು ನಿಮ್ಮತ್ರನೇ ಉತ್ತರ ಇದೆ ನಿಮ್ಮತ್ರನೇ ಪ್ರಶ್ನೆ ಇದೆ. ನಿಮ್ಮ ಎರಡು ಪ್ರಶ್ನೆ ಮತ್ತು ಉತ್ತರವನ್ನು ವ್ಯಾಖ್ಯಾನ ಮಾಡಿ ಎಂದರು.
ಅರ್ಜಿ ಆಹ್ವಾನಿಸಿ ಹಣ ಸಂಗ್ರಹವಾದ ವಿಚಾರವಾಗಿ ಮಾತನಾಡಿದ ಅವರು, ಇಲ್ಲ ಮೊದಲೆಲ್ಲಾ ಸಂಗ್ರಹ ಮಾಡಲಾಗುತ್ತಿತ್ತು. ಆದರೆ ಮೊದಲು ಸದ್ದು ಮಾಡುತ್ತಿರಲಿಲ್ಲ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದು ಹೇಳಿದ್ರು. ಇದನ್ನೂ ಓದಿ : – ಹಾಲು, ಮೊಸರು ಆಯ್ತು ಈಗ ತುಪ್ಪದ ಬಿಸಿ..!
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಡಿಕೆ ಮತ್ತು ಸಿದ್ದು ಭೇಟಿಯಾಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಎಲ್ಲರೂ ಒಗ್ಗಟ್ಟಿನಿಂದ ಕೆಲಸವನ್ನು ಮಾಡಬೇಕು. ವ್ಯಕ್ತಿ ಮುಖ್ಯ ಅಲ್ಲ ಪಕ್ಷ ಮುಖ್ಯ. ಇದು ಎಲ್ಲರೂ ಸೇರ್ಕೊಂಡು ಒಮ್ಮತದ ತೀರ್ಮಾನ ಮಾಡಿಕೊಂಡು ಪಾರ್ಟಿಯನ್ನು ಅಧಿಕಾರಕ್ಕೆ ತರಬೇಕು. ಅಧಿಕಾರಕ್ಕೆ ತಂದಾಗ ಎಲ್ಲರಿಗೂ ಸೇರಿ ಅಧಿಕಾರ ಸಿಗುತ್ತದೆ ಅದು ಬಹಳ ಮುಖ್ಯ. ಇಲ್ಲಿ ಯಾರ್ಯಾರ ಶಕ್ತಿ ಎಷ್ಟಿದೆ ಅಂತ ನಾವು ಹೇಳೋಕೆ ಆಗೋದಿಲ್ಲ ಎಲ್ಲರಿಗೂ ಸಹ ಶಕ್ತಿ ಇರುತ್ತದೆ. ಕೆಲವರಿಗೆ 100 ಬೂತ್ ನೋಡುವ ಶಕ್ತಿ ಇರುತ್ತದೆ ಕೆಲವರಿಗೆ 10 ಬೂತ್ ನೋಡುವ ಶಕ್ತಿ ಇರುತ್ತದೆ ಕೆಲವರಿಗೆ 50 ಬೂತ್ ನೋಡುವ ಶಕ್ತಿ ಇರುತ್ತದೆ. ಇವೆಲ್ಲವನ್ನು ತಿಳ್ಕೊಂಡು ಟಿಕೆಟ್ ನೀಡುತ್ತೇವೆ. ಇವತ್ತಿನ ಸಭೆಯಲ್ಲಿ ನಾವು ಅವರಿಗೆ ಕೆಲವು ಮಾರ್ಗದರ್ಶನ ಕೊಡ್ತೀವಿ ಅದನ್ನ ಅವರು ಪಾಲಿಸಿಕೊಂಡು ಹೋಗಬೇಕು ಎಂದು ಹೇಳಿದ್ರು.
ಇದನ್ನೂ ಓದಿ : – ತಾರಕಕ್ಕೇರಿದ ಗಡಿ ವಿವಾದ – ಒಂದಿಂಚು ಭೂಮಿ ಬಿಟ್ಟುಕೊಡುವುದಿಲ್ಲ ಎಂದ ಸಿಎಂ ಏಕನಾಥ್ ಶಿಂಧೆ