ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ( congress ) ಗೆ ಇಲ್ಲ. ಕೋಲ್,೨ಜಿ ಸ್ಕ್ಯಾಂ ಎಲ್ಲವೂ ಆಗಿವೆ. ೧೨ ಲಕ್ಷ ಕೋಟಿಗೂ ಹೆಚ್ಚು ಹಗರಣ ಆಗಿವೆ ಎಂದು ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಯಾರೋ ಒಬ್ಬ ಕಾಂಟ್ರಾಕ್ಟರ್ ಆರೋಪ ಮಾಡಿದ್ದಾನೆ. ಇದನ್ನ ಇಟ್ಕೊಂಡು ಇವರು ಓಡಾಡ್ತಿದ್ದಾರೆ. ಇದನ್ನ ನಾವು ಯಶಸ್ವಿಯಾಗಿ ಹೆದುರಿಸುತ್ತೇವೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಪಂಚಮಸಾಲಿಮೀಸಲಾತಿಗೆ ಬಿಎಸ್ ವೈ ವಿರೋಧ ಎಂಬ ವಿಚಾರ
ವೀರಶೈವ ಲಿಂಗಾಯತರನ್ನ ಒಡೆದವರು ಯಾರು..? ಅದರಲ್ಲಿ ಬೇಳೆ ಬೇಯಿಸಿಕೊಳ್ಳಲು ಹೊರಟ್ರು. ಆದರೆ ಏನಾಯ್ತು,ಕಾಂಗ್ರೆಸ್ ಗೆ. ಈಗ ಪಂಚಮಸಾಲಿ ( panchamsali ) ವಿಚಾರದಲ್ಲಿ ಪಿತೂರಿ ನಡೆದಿದೆ. ಸ್ವಾಮೀಜಿಗಳನ್ನ ಎಳೆಯುವ ಪ್ರಯತ್ನ ನಡೆದಿದೆ. ಇಡೀ ಸಮುದಾಯ ಯಡಿಯೂರಪ್ಪನವರನ್ನ ಒಪ್ಪಿಕೊಳ್ಳುತ್ತೆ. ಬಿಎಸ್ ವೈ ಎಲ್ಲ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದಾರೆ. ಬಿಎಸ್ ವೈ ಎಲ್ಲೂ ಪಂಚಮಸಾಲಿ ಮೀಸಲಾತಿಗೆ ವಿರೋಧ ಮಾಡಿಲ್ಲ. ಸಮಾಜವನ್ನ ಒಡೆಯುವ ಕೆಲಸ ರಾಜಕೀಯ ವಿರೋಧಿಗಳು ಮಾಡುತ್ತಿದ್ದಾರೆ ಎಂದು ಹೇಳಿದ್ರು. ಇದನ್ನು ಓದಿ :- ಸ್ಮಶಾನಕ್ಕಾಗಿ ಹೋರಾಟ – ಗ್ರಾಮ ಪಂಚಾಯತ್ ಮುಂದೆಯೇ ಗುಂಡಿ ತೋಡಿದ ದಲಿತ ಕುಟುಂಬಗಳು
ಬಿಜೆಪಿಯಲ್ಲಿ ಭ್ರಷ್ಟಾಚಾರ ಇಲ್ವೇ ಎಂಬ ಆರೋಪ
ಸುಪ್ರೀಂ ಕೋರ್ಟ್ ( suprem court ) ಪಿಟಿಷನ್ ನಲ್ಲಿಸ್ಟೇ ಕೊಟ್ಟಿದೆ. ಯಡಿಯೂರಪ್ಪನವರಿಗೆ ಸ್ಟೇ ಕೊಟ್ಟಿದೆ. ಯಾರು ಯಡಿಯೂರಪ್ಪ ವಿರುದ್ಧ ಪಿಟಿಷನ್ ಹಾಕಿದಾರೂ ಅವರ ವಿರುದ್ಧವೇ ಮಾನನಷ್ಟ ಹಾಕಲಾಗಿದೆ. ಯಡಿಯೂರಪ್ಪ ಬಿಡಿಎ ಪೋರ್ಟ್ ಪೊಲಿಯೋ ಇತ್ತು. ಅಲಿಗೇಶನ್ ಮಾಡುವಾಗ ಯಾರಿಗೆ ಅನ್ನೋದನ್ನ ಹೇಳಬೇಕಲ್ಲ. ಆ ಕಂಪನಿಗೆ ಅವರು ಕೊಟ್ಟಿಲ್ಲ. ಆ ಕನ್ಸ್ ಟ್ರಕ್ಷನ್ ಕಂಪನಿಯಿಂದ ಒಂದು ರೂ ಹಣಸಂದಾಯ ಹಾಕಿಲ್ಲ. ಡಿಪಾರ್ಮೇಶನ್ ಕೇಸ್ ಮೂವ್ ಮಾಡಿದ್ದೇನೆ. ಈ ಆರೋಪದ ಬಗ್ಗೆ ಪೊಲೀಸ್ ತನಿಖೆ ಆಗಿದೆ. ಎಸಿಬಿಯಲ್ಲೂ ತನಿಖೆ ಯಾಗಿದೆ. ಎಲ್ಲಾ ಸ್ಟೇಟ್ ಮೆಂಟ್ ಗಳಲ್ಲೂ ಪಡೆಯಲಾಗಿದೆ. ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಭ್ರಷ್ಟಾಚಾರ ಇನ್ನೆಲ್ಲಿಂದ ಬಂದಿದೆ. ನಾವು ಹೆದರಿ ಓಡಿ ಹೋಗುವವರು ಅಲ್ಲ. ಮ೨೯,೩೦ ಕೇಸ್ ಎದರಿಸಿದ್ದೇವೆ೩೧ ಕೇಸ್ ಎದುರಿಸ್ತೇವೆ. ವಿಜಯೇಂದ್ರ ವಿರುದ್ಧ ಯಾವ ಕುತಂತ್ರ ನಡೆಯಲ್ಲ. ಇವೆಲ್ಲವನ್ನ ಮೆಟ್ಟಿ ನಿಲ್ಲುವ ಶಕ್ತಿ ನಮಗಿದೆ.ಇಂತ ನೂರು ಆರೋಪ ಬರಲಿ ಎಂದು ಹೇಳಿದ್ರು.
ಇದನ್ನು ಓದಿ :- ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ದರ ಏರಿಕೆ ಶಾಕ್ – ಟ್ವೀಟ್ ಮೂಲಕ ಸರ್ಕಾರಕ್ಕೆ ಹೆಚ್.ಡಿ.ಕೆ ತರಾಟೆ