ಚಿಕ್ಕಮಗಳೂರು ( chikkamagaluru ) ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮ ( bindiga deviramma ) ದರ್ಶನ ಪಡೆಯಲು ಭಕ್ತರ ನೂಕು ನುಗ್ಗಲು ಉಂಟಾಗಿದೆ.
ವರ್ಷಕೊಮ್ಮೆ ನೀಡುವ ದೇವಿರಮ್ಮನನ್ನ ಕಣ್ತುಂಬಿಸಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿದೆ. ದೇವಿ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದನ್ನೂ ಓದಿ : – ಕರ್ನಾಟಕದಲ್ಲಿ ‘ಕೆಜಿಎಫ್ 2’ ದಾಖಲೆ ಧೂಳಿಪಟ ಮಾಡಿದ ‘ಕಾಂತಾರ’- ನಿಲ್ಲದ ಗುಳಿಗನ ಅಬ್ಬರ
ರಾತ್ರಿಯಿಂದಲೇ ಭಕ್ತ ಸಮೂಹ ಬೆಟ್ಟವನ್ನೇರುತ್ತಿರುತ್ತಿದೆ. ಕಲ್ಲು ಮುಳ್ಳಿನ ಹಾದಿಯನ್ನು ಲೆಕ್ಕಿಸದೇ ಭಕ್ತರು ಬೆಟ್ಟವನ್ನು ಏರುತ್ತಿದ್ದಾರೆ. ದುರ್ಗಮ ಹಾದಿಯಲ್ಲಿ ಬರಿಗಾಲಲ್ಲಿ ಬೆಟ್ಟ ಏರುತ್ತಿದ್ದಾರೆ. ಐವತ್ತು ಸಾವಿರಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಮಕ್ಕಳು, ಯುವಕರು, ಹಿರಿಯರು, ಎನ್ನದೆ ಆಯಾಸವಾದರೂ ನಿಂತು ನಿಂತು ಬೆಟ್ಟವನ್ನು ಏರುತ್ತಿದ್ದಾರೆ. ದೇವಿರಮ್ಮ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ.
ವರ್ಷಕ್ಕೊಮ್ಮೆ ಬೆಟ್ಟದ ಮೇಲೆ ಭಕ್ತಾದಿಗಳಿಗೆ ದರ್ಶನ ನೀಡುವ ದೇವಿರಮ್ಮ ವಿಶೇಷವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯುವಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ : – ಕಾಂತಾರ ಸಿನಿಮಾ ಸುತ್ತ ಎದ್ದಿರುವ ವಿವಾದಕ್ಕೆ ನಟ ಕಿಶೋರ್ ಹೇಳಿದ್ದೇನು ಗೊತ್ತಾ..?