ಚಿಕ್ಕಮಗಳೂರು (Chikkamagaluru) ಕಡೂರಿನ ಲಕ್ಷ್ಮೀಶನಗರದ ಮನೆಯ ಹತ್ತಿರ ನಿಲ್ಲಿಸಿದ್ದ ಕಾರ್ (Car) ಮೇಲೆ ಕಿಲ್ ಯು ಜಿಹಾದಿ ಬರಹ ಬರೆದಿರುವ ಅರೋಪ ಕೇಳಿ ಬಂದಿದೆ. ಕಳೆದ ರಾತ್ರಿ ನಡೆದ ಕಿಡಿಗೇಡಿಗಳ ಕೃತ್ಯಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಕಾರಿನ ನಾಲ್ಕು ಚಕ್ರದ ಗಾಳಿ ತೆಗೆದು ಕಿಡಿಗೇಡಿಗಳು ಬರಹ ಬರೆದಿದ್ದಾರೆ. ಕಿಲ್ ಯು ಜಿಹಾದ್, ಅಶ್ಲೀಲ ಪದಗಳ ಬಳಕೆ ಮಾಡಿದ್ದಾರೆ. RSS ಧರ್ಮಜಾಗರಣ ಸಹಸಂಯೋಜಕರಾದ ಡಾ.ಶಶಿಧರ್ ಚಿಂದಿಗೆರೆ ಜಯಣ್ಣ ಕಾರಿನ ಮೇಲೆ ಕಿಲ್ ಯು ಜಿಹಾದಿ ಎಂದು ಬರೆದಿದ್ದಾರೆ. ಡಾ.ಶಶಿಧರ್ ಚಿಂದಿಗೆರೆ ಜಯಣ್ಣ ಕಡೂರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ :- ಬಡವರಿಗೆ ಮನೆ ನಿರ್ಮಾಣ ವಿಚಾರ – ಕೆಜಿಎಫ್ ಬಾಬು ಮನವಿಗೆ ಸ್ಪಂದಿಸದ ಶಾಸಕ ಗರುಡಾಚಾರ್