ತಮ್ಮನ ಮಗ ಚಂದ್ರುವಿನ ಸಾವಿನಿಂದ ಆತಂಕಕ್ಕೆ ಒಳಗಾಗಿರುವ ರೇಣುಕಾಚಾರ್ಯ ( RENUKACHARYA ) ಕುಟುಂಬಕ್ಕೆ ನ್ಯಾಮತಿ, ಮಾದನಬಾವಿ, ಆರುಂಡಿ, ಕೆಂಚಿಕೊಪ್ಪದಿಂದ ಬಂದಿದ್ದ ಮಹಿಳೆಯರು ಸಾಂತ್ವನ ಹೇಳಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಊಟ ಮಾಡಿಸಿ ಸಾಂತ್ವನ ಹೇಳಿದ್ದಾರೆ.
ಶಾಸಕರಿಗಾಗೀ ಇಡ್ಲಿ, ಪಡ್ಡು, ರೊಟ್ಟಿ, ಗಿಣ್ಣ ಮಾಡಿಕೊಂಡು ಬಂದಿದ್ದರು. ಮಾತೆಯರಿಂದ ತುತ್ತು ತಿಂದ ರೇಣುಕಾಚಾರ್ಯ ಬಳಿಕ ಮಹಿಳೆಯರಿಗೆ ನಮಸ್ಕರಿಸಿದರು. ನಿಮ್ಮ ಈ ಪ್ರೀತಿಗೆ ನಾನು ಸದಾ ಚಿರಋಣಿ. ಇಂದು ಬೆಳಂಬೆಳ್ಳಿಗೆ ಮಾದೇನಹಳ್ಳಿ ಗ್ರಾಮದ ಮಾತೆಯರು ಬೆಳಗಿನ ಉಪಹಾರ ಮಾಡಿಕೊಂಡು ನಮ್ಮ ನಿವಾಸಕ್ಕೆ ಆಗಮಿಸಿ ತುತ್ತು ಮಾಡಿ ತಿನಿಸಿದ್ದು, ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ : – INVEST ಕರ್ನಾಟಕದಲ್ಲಿ ನಿರೀಕ್ಷೆಗೂ ಮೀರಿ ಬಂಡವಾಳ ಹೂಡಿಕೆಯಾಗಿದೆ – ಮುರುಗೇಶ್ ನಿರಾಣಿ