ಬಳ್ಳಾರಿ( ballari ) ಯಲ್ಲಿ ನಡೆದ ಕಾಂಗ್ರೆಸ್ ಜೋಡೋ ಯಾತ್ರೆಯ ಬಹಿರಂಗ ಸಮಾವೇಶಕ್ಕೆ ತೆರಳಿದ್ದ ಗದಗನ ಮಹಿಳೆ ಕಾಂಗ್ರೆಸ್ ನ ಕಾರ್ಯಕರ್ತೆಯೋರ್ವರು ಬಳ್ಳಾರಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
24ನೇ ವಾರ್ಡ್ ಮಕಾನಗಲ್ಲಿಯ ನಿವಾಸಿ ಮಾಲನಬಿ ಎಚ್. ಮುಲ್ಲಾನವರ (48) ಹೃದಯಾಘಾತದಿಂದ ಸಾವನ್ನಪ್ಪಿರುವ ಮಹಿಳೆಯಾಗಿದ್ದಾರೆ. ಬಳ್ಳಾರಿ ( ballari ) ಯಲ್ಲಿ ನಡೆದ ಕಾಂಗ್ರೆಸ್ ಜೋಡೋ ಯಾತ್ರೆ ಬಹಿರಂಗ ಸಮಾವೇಶಕ್ಕೆ ಭಾಗವಹಿಸಲು ಗದಗನಿಂದ ಶನಿವಾರ ಬೆಳಿಗ್ಗೆ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಮಾಲನಬಿ ಅವರಿಗೆ ಬಸ್ಸಿನಲ್ಲೇ ಹೃದಯಾಘಾತವಾಗಿದೆ. ಈ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ, ವೈದ್ಯರು ಪರಿಶೀಲಿಸಿ ಮಹಿಳೆ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.
ಇದನ್ನೂ ಓದಿ :- ವಿಜಯನಗರ ಉಕ್ಕು ಕಾರ್ಖಾನೆ ಆರಂಭ ಮಾಡಿದ್ದು ಯಾರಪ್ಪ ರಾಮುಲು..? – ಸಿದ್ದರಾಮಯ್ಯ ಪ್ರಶ್ನೆ