ಹಿಂದೂ ದೇವಾಲಯಗಳ ಮೇಲೆ ಉಗ್ರರ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಗದಗ ( GADAGA ) ದಲ್ಲಿ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳ ಖಂಡನೆ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶ, ಕರ್ನಾಟಕ ರಾಜ್ಯ ಶಾಂತಿ ಪ್ರಿಯ ನಾಡು. ಅವರವ್ರು ಅವರ ಸಂಪ್ರದಾಯ, ಆಚಾರಗಳನ್ನು ಪಾಲನೆ ಮಾಡ್ತಾರೆ. ಹಿಂದೂ ದೇವಾಲಯಗಳ ಮೇಲೆ ಉಗ್ರರ ದಾಳಿ ಖಂಡಿಸುತ್ತೇನೆ. ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಉಗ್ರ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ : – ಬೆಂಗಳೂರಿಗೂ ತಟ್ಟಿದ ಧರ್ಮ ದಂಗಲ್..!
ಕೋಮು ಗಲಭೆಯಿಂದ ಸೌಹಾರ್ದತೆ ನಾಶವಾಗುತ್ತಿದೆ. ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕು. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಹಿಂದೂ ದೇವಾಲಯಗಳಲ್ಲಿ ಮುಸಲ್ಮಾನರ ವ್ಯಾಪಾರದ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ಗಳು ತಿಳಿಸಿದ್ದಾರೆ.
ಇದನ್ನೂ ಓದಿ : – ನನಗೆ ಏನು ಗೊತ್ತು ನಿಮ್ಮತ್ರನೇ ಉತ್ತರ ಇದೆ ನಿಮ್ಮತ್ರನೇ ಪ್ರಶ್ನೆ ಇದೆ – ಡಿ.ಕೆ ಶಿವಕುಮಾರ್