ಭಾರತ್ ಜೋಡೋ ( BHARTH JODO ) ಯಾತ್ರೆಯಿಂದ ಬಿಜೆಪಿಗೆ ಭಯವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ( SIDDRAMAIAH ) ಗೆ ತಿರುಗೇಟು ನೀಡಿದ್ದಾರೆ. ಗದಗ ( GADAGA )ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ನಮಗ್ಯಾಕೆ ಭಯ, ಸಿದ್ಧರಾಮಣ್ಣ, ಡಿಕೆಶಿಗೆ ಭಯ ಶುರುವಾಗಿದೆ.
ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ( RAHUL GANDHI ) ಒಂದು ದಿನ ಸಿದ್ದರಾಮಯ್ಯ ಕೈ ಹಿಡಿದುಕೊಂಡು ಓಡಾಡ್ತಾರೆ. ಮತ್ತೊಂದು ದಿನ ಡಿಕೆಶಿ ಕೈ ಹಿಡಿದುಕೊಂಡು ಓಡಾಡ್ತಾರೆ. ಯಾರ ಕೈ ಗಟ್ಟಿ ಮಾಡ್ತಾರೆ ಅಂತಾ ಅವರೊಳಗೆ ಭಯ ಶುರುವಾಗಿದೆ. ಅದರ ಮಧ್ಯೆ ಅವರಿಗೆ ನಿದ್ದೆ ಬರ್ತಾ ಇಲ್ಲ . ಮೂರನೇ ಶಕ್ತಿ ಖರ್ಗೆ ಅವರದ್ದು ಪ್ರಾರಂಭ ಆಗಿದೆ. ಡೆಲ್ಲಿಯಲ್ಲಿ ಕೂತು ಇವರನ್ನೆಲ್ಲಾ ಆಟ ಆಡಿಸ್ತಾರೆ. ಹಾಗಾಗಿ ಅವರಿಗೆ ಭಯ ಶುರುವಾಗಿದೆ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಸೋತಿದ್ದಾರೆ. ಈಗಾಗಲೇ ಕಾಂಗ್ರೆಸ್ ಮುಕ್ತ ಭಾರತ ಆಗಿದೆ. ಇದನ್ನೂ ಓದಿ :- ರಾಹುಲ್ ಗಾಂಧಿ ಜೊತೆ ಬರಿಗಾಲಲ್ಲೇ ನಡೆಯುತ್ತಿರುವ ಈ ಯುವ ನಾಯಕ ಯಾರು ಗೊತ್ತಾ…?
ರಾಹುಲ್ ಗಾಂಧಿ ಅಧ್ಯಕ್ಷರಾಗಿದ್ದಾಗಲೇ ಕಾಂಗ್ರೆಸ್ ಮುಕ್ತ ಭಾರತ ಆಗಿದೆ. ರಾಹುಲ್ ಅವರನ್ನ ಅವರ ಕ್ಷೇತ್ರದಿಂದ ಓಡಿಸಿದ್ದಾರೆ. ವಯನಾಡ್ ನಲ್ಲಿ ಕ್ಷೇತ್ರ ಹುಡುಕಿಕೊಂಡಿದ್ದಾರೆ. ಸಿದ್ಧರಾಮಣ್ಣ ವರುಣಾ ಕ್ಷೇತ್ರದಿಂದ ಓಡಿಯಾಗಿದೆ. ಬಾದಾಮಿಯಲ್ಲಿ ಮುಂದೆ ಸೀಟ್ ಇಲ್ಲ. ಕೋಲಾರ ( kolara ) ಕ್ಕೆ ಹೋದರೆ ಜನ ಓಡಿಸ್ತಾರೆ. ಮೈಸೂರಿಗೆ ಬರಬೇಡಿ ಅಂತಾ ಹೇಳಿದ್ದಾರೆ. ಇದು ಜೋಡೋ ಅಲ್ಲ ಸಿದ್ದರಾಮಯ್ಯ ಜಾಗ ಹುಡುಕೋ ಯಾತ್ರೆ. ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಕಷ್ಟ. ರಾಹುಲ್ ಗಾಂಧಿಯವರೊಟ್ಟಿಗೆ ಉತ್ತರ ಪ್ರದೇಶದಲ್ಲಿ ಕ್ಷೇತ್ರ ಹುಡುಕೋದು ಒಳ್ಳೇದು ಅಂತಾ ಸಿದ್ದರಾಮಯ್ಯಗೆ ಕಟೀಲ್ ಟಾಂಗ್ ನೀಡಿದ್ರು.
ಇದನ್ನೂ ಓದಿ :- ಟಿಪ್ಪುವಿಗೂ ಮೈಸೂರಿಗೂ ಏನು ಸಂಬಂಧ…? – ಪ್ರತಾಪ್ ಸಿಂಹ ಪ್ರಶ್ನೆ