ಹುಬ್ಬಳ್ಳಿ (Hubballi) ಯಲ್ಲಿ ಕೆಲ ಶಾಲೆ ಮೈದಾನಗಳು ಪುಂಡ ಪೋಕರಿಗಳ ಮಜಾ ಅಡ್ಡಗಳಾಗಿವೆ. ದುಶ್ಚಟ ಮಾಡಲು ಗ್ರೌಂಡ್ (Ground) ಗೆ ಬರಬೇಡಿ ಎಂದು ಹೇಳಿದ ಶಿಕ್ಷಕ (Teacher) ರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ನಶೆಯಲ್ಲಿದ್ದ ಯುವಕರು ಸೆಕ್ಯೂರಿಟಿ ಗಾರ್ಡ್ ಹಾಗೂ ಶಿಕ್ಷಕರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.
ಮಾಹಿತಿ ಪಡೆದು ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿದ ಯುವಕರ ಮೇಲೆ ಪೊಲೀಸರು ಎರಡೂ ಸುಮೋಟೋ ಕೇಸ್ ದಾಖಲಿಸಿದ್ದಾರೆ . ಹುಬ್ಬಳ್ಳಿಯ ಚನ್ನಪೇಟೆ ಹಾಗೂ ಅಸರಹೊಂಡ ಏರಿಯಾ ಯುವಕರ ಮೇಲೆ ದಾಂಧಲೆ ಆರೋಪ ಕೇಳಿ ಬಂದಿದೆ. ಕಾರ್ತಿಕ್, ಅಜಯ್, ಹಾಗೂ ಇನ್ನೋರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ : – ಬಳ್ಳಾರಿಯ ತುಂಗಭದ್ರಾ ಕಾಲುವೆಗೆ ಉರುಳಿ ಬಿದ್ದ ಪ್ಯಾಸೆಂಜರ್ ಆಟೋ