ಕೋಲಾರ ( KOLARA ) ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಮೇಶ್ ಕುಮಾರ್ ಹಾಗು ಕೆ.ಎಚ್ ಮುನಿಯಪ್ಪ ಬಣದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ( CONGRESS ) ಕಚೇರಿ ಎದುರೇ ಕೈ ಕೈ ಮಿಲಾಯಿಸಲು ಮುಂದಾದ್ರು.
ಸಿದ್ದರಾಮಯ್ಯ ( SIDDARAMAIAH ) ಸ್ಪರ್ಧೆ ನಿರ್ಧಾರ ಹೈ ಕಮಾಂಡ್ ಗೆ ಬಿಡೋಣ, ಇಲ್ಲಿರೋ ನಾಯಕರು ಒತ್ತಡ ಹೇರೋದು ಬೇಡ ಎಂದು ಆಗ್ರಹಿಸಿದ್ರು. ಈ ವೇಳೆ ಬೇರೆ ಕ್ಷೇತ್ರದ ನಾಯಕರಿಗೆ ಕೋಲಾರ ಉಸಾಬರಿ ಬೇಡ ಎಂದ ಕೆಎಚ್ ಮುನಿಯಪ್ಪ ಹೇಳಿದ್ರು. ಈ ವೇಳೆ ಸಿದ್ದರಾಮಯ್ಯ ಅವರೇ ಕೋಲಾರದಿಂದ ಸ್ಪರ್ಧಿಸಲಿ ಎಂದು ಸಿದ್ದರಾಮಯ್ಯ ಅವರಿಗೆ ಕೆಲ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಈ ವೇಳೆ ಕೆಎಚ್ ಮುನಿಯಪ್ಪ ಪರ ಕೆಲ ಕಾರ್ಯಕರ್ತರು ಘೋಷಣೆ ಹಾಕಿದ್ರು. ಎರಡೂ ಕಡೆಯವರ ಮಧ್ಯೆ ಗೊಂದಲ ಉಂಟಾಗಿ, ಪರಸ್ಪರ ವಾಗ್ವಾದ, ನೂಕಾಟ ತಳ್ಳಾಟ ಜೊತೆಗೆ ಕೈ ಕೈ ಮಿಲಾಯಿಸಲು ನಾಯಕರು ಮುಂದಾಗಿದ್ದಾರೆ. ಇದನ್ನೂ ಓದಿ : – ನಟ ದ್ವಾರಕೀಶ್ ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ
ವಾಗ್ವಾದ ನಿಂತ ಬಳಿಕ ಮತ್ತೊಮ್ಮೆ ಭಾಷಣ ಮಾಡಿದ ಕೆಎಚ್ ಮುನಿಯಪ್ಪ ಹೀಗೆ ಗಲಾಟೆ ಮಾಡೋರು ಸಿದ್ದರಾಮಯ್ಯ ರನ್ನ ಕ್ಯಾಂಡೇಟ್ ಮಾಡೋಕೆ ಹೋಗಿದ್ದಾರೆ ಎಂದು ನಕ್ಕು ಸಮ್ಮನಾದ್ರು. ಕಾಂಗ್ರೆಸ್ ( CONGRESS ) ಸಭೆಯಲ್ಲಿ ಗೊಂದಲ ಸೃಷ್ಟಿಸಲು ಕೆಲವರು ಬೇಕಂತಲೇ ಸಭೆಗೆ ಬಂದಿದ್ದಾರೆ ಎಂದು ಕೆಎಚ್ ಮುನಿಯಪ್ಪ ಬೆಂಬಲಿಗರು ಕಿಡಿಕಾರಿದ್ರು. ಈ ವೇಳೆ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನ ಕೋಲಾರ ನಗರ ಪೊಲೀಸರು ಸಮಾಧಾನ ಪಡಿಸಿದ್ರು.
ಇದನ್ನೂ ಓದಿ : –ನಾಳೆ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಮನೆ ಗೃಹ ಪ್ರವೇಶ…!