ಕೋಲಾರ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ – ಸಿದ್ದರಾಮಯ್ಯ ಸ್ಫರ್ಧೆಗೆ ಮುನಿಯಪ್ಪ ಬೆಂಬಲಿಗರ ವಿರೋಧ

ಕೋಲಾರ  ( KOLARA ) ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಮೇಶ್ ಕುಮಾರ್ ಹಾಗು ಕೆ.ಎಚ್ ಮುನಿಯಪ್ಪ ಬಣದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ( CONGRESS ) ಕಚೇರಿ ಎದುರೇ ಕೈ ಕೈ ಮಿಲಾಯಿಸಲು ಮುಂದಾದ್ರು.

ಕೋಲಾರ  ( KOLARA ) ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಮೇಶ್ ಕುಮಾರ್ ಹಾಗು ಕೆ.ಎಚ್ ಮುನಿಯಪ್ಪ ಬಣದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ( CONGRESS ) ಕಚೇರಿ ಎದುರೇ ಕೈ ಕೈ ಮಿಲಾಯಿಸಲು ಮುಂದಾದ್ರು.

ಸಿದ್ದರಾಮಯ್ಯ ( SIDDARAMAIAH ) ಸ್ಪರ್ಧೆ ನಿರ್ಧಾರ ಹೈ ಕಮಾಂಡ್ ಗೆ ಬಿಡೋಣ, ಇಲ್ಲಿರೋ ನಾಯಕರು ಒತ್ತಡ ಹೇರೋದು ಬೇಡ ಎಂದು ಆಗ್ರಹಿಸಿದ್ರು. ಈ ವೇಳೆ ಬೇರೆ ಕ್ಷೇತ್ರದ ನಾಯಕರಿಗೆ ಕೋಲಾರ ಉಸಾಬರಿ ಬೇಡ ಎಂದ ಕೆಎಚ್ ಮುನಿಯಪ್ಪ ಹೇಳಿದ್ರು. ಈ ವೇಳೆ ಸಿದ್ದರಾಮಯ್ಯ ಅವರೇ ಕೋಲಾರದಿಂದ ಸ್ಪರ್ಧಿಸಲಿ ಎಂದು ಸಿದ್ದರಾಮಯ್ಯ ಅವರಿಗೆ ಕೆಲ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಈ ವೇಳೆ ಕೆಎಚ್ ಮುನಿಯಪ್ಪ ಪರ ಕೆಲ ಕಾರ್ಯಕರ್ತರು ಘೋಷಣೆ ಹಾಕಿದ್ರು. ಎರಡೂ ಕಡೆಯವರ ಮಧ್ಯೆ ಗೊಂದಲ ಉಂಟಾಗಿ, ಪರಸ್ಪರ ವಾಗ್ವಾದ, ನೂಕಾಟ ತಳ್ಳಾಟ ಜೊತೆಗೆ ಕೈ ಕೈ ಮಿಲಾಯಿಸಲು ನಾಯಕರು ಮುಂದಾಗಿದ್ದಾರೆ.  ಇದನ್ನೂ ಓದಿ : – ನಟ ದ್ವಾರಕೀಶ್ ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ


ವಾಗ್ವಾದ ನಿಂತ ಬಳಿಕ ಮತ್ತೊಮ್ಮೆ ಭಾಷಣ ಮಾಡಿದ ಕೆಎಚ್ ಮುನಿಯಪ್ಪ ಹೀಗೆ ಗಲಾಟೆ ಮಾಡೋರು ಸಿದ್ದರಾಮಯ್ಯ ರನ್ನ ಕ್ಯಾಂಡೇಟ್ ಮಾಡೋಕೆ ಹೋಗಿದ್ದಾರೆ ಎಂದು ನಕ್ಕು ಸಮ್ಮನಾದ್ರು. ಕಾಂಗ್ರೆಸ್ ( CONGRESS ) ಸಭೆಯಲ್ಲಿ ಗೊಂದಲ ಸೃಷ್ಟಿಸಲು ಕೆಲವರು ಬೇಕಂತಲೇ ಸಭೆಗೆ ಬಂದಿದ್ದಾರೆ ಎಂದು ಕೆಎಚ್ ಮುನಿಯಪ್ಪ ಬೆಂಬಲಿಗರು ಕಿಡಿಕಾರಿದ್ರು. ಈ ವೇಳೆ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನ ಕೋಲಾರ ನಗರ ಪೊಲೀಸರು ಸಮಾಧಾನ ಪಡಿಸಿದ್ರು.

ಇದನ್ನೂ ಓದಿ : –ನಾಳೆ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಮನೆ ಗೃಹ ಪ್ರವೇಶ…!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!