ರಾಜ್ಯದಲ್ಲಿ ಕಾಂಗ್ರೆಸ್ ( congress ) ಪಾದಯಾತ್ರೆಯಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ಕೋಲಾರ( kolara ) ದಲ್ಲಿ ಉಸ್ತುವಾರಿ ಸಚಿವ ಮುನಿರತ್ನ ( munirathna ) ಹೇಳಿದ್ದಾರೆ.
ರಾಜ್ಯ ಬಿಜೆಪಿ ( bjp ) ಸರ್ಕಾರ ಪ್ರಾಮಾಣಿಕತೆಯಿಂದ ಜನರ ಸೇವೆ ಮಾಡ್ತಿದೆ. 20 ವರ್ಷದಿಂದ ಬಾಕಿಯಿದ್ದ SC-ST ಮೀಸಲಾತಿ ನಾವು ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಯಾಕೆ ಮೀಸಲಾತಿ ನೀಡಿಲ್ಲ. ಅಹಿಂದ ಪರವಾಗಿ ಹೋರಾಟ ಮಾಡಿದೊರು ಯಾಕೆ ಮೀಸಲಾತಿ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ :- ಎದೆ ನೋವಿನಿಂದ ಸಂಗೀತ ನಿರ್ದೇಶಕ ಹಂಸಲೇಖ ಆಸ್ಪತ್ರೆಗೆ ದಾಖಲು
ಇಂದಿನಿಂದ 5 ದಿನಗಳ ಕಾಲ ರಸ್ತೆ ಹಾಗು ವಿವಿಧ ಕಾಮಗಾರಿ ಪರಿಶೀಲನೆ ನಡೆಸುತ್ತೇವೆ. ಇಂದು ಇಡೀ ದಿನ ಕಾಮಗಾರಿಗಳ ಮಾಹಿತಿ ಪಡೆದು ನಾಳೆ ಸ್ತಳಕ್ಕೆ ಭೇಟಿ ನೀಡುವೆ ಎಂದು ಹೇಳಿದ್ರು. ಗುತ್ತಿಗೆ ದಾರರ ಸಂಘದ ಮುಖಂಡರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಯಾರೊಂದಿಗು ರಾಜಿ ಸಂಧಾನ ಮಾತುಕತೆಯೇ ಇಲ್ಲ. ಗುತ್ತಿಗೆದಾರರು ಬಾಕಿ ಮೊತ್ತಕ್ಕಾಗಿ ಮನವಿ ನೀಡಿದ್ದಾರೆ, ಸರ್ಕಾರಕ್ಕೆ ಮಾಹಿತಿ ನೀಡುವೆ ಕಾಮಗಾರಿ ಪರಿಶೀಲನೆ ಕಾರ್ಯದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಹೇಳಿದ್ರು.
ಇದನ್ನೂ ಓದಿ :- ಗಂಧದ ಗುಡಿ ಟ್ರೇಲರ್ ನೋಡಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮೆಚ್ಚುಗೆ