ಇಂದು ಯಾವುದೇ ಆತಂಕ ಇಲ್ಲದೆ ಪಂಚರತ್ನ ಕಾರ್ಯಕ್ರಮ (Pancharatna yatre) ನಡೆಯುತ್ತಿದೆ. ಅದ್ಬುತವಾಗಿ ಪೆಂಡಾಲ್ ಸಮೇತ ಕಾರ್ಯಕ್ರಮ ಏರ್ಪಾಡು ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ (HD.Devegowda) ಹೇಳಿದ್ದಾರೆ. ಪಂಚರತ್ನ ರಥಯಾತ್ರೆ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಕಳೆದ ನವೆಂಬರ್ 1 ರಂದು ಮಳೆ ಕಾರಣ ಕಾರ್ಯಕ್ರಮ ರದ್ದಾಗಿತ್ತು.
ನನ್ನ ದೃಷ್ಟಿಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಇನ್ನು ಮುಂದಕ್ಕೆ ಈ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮ ಮಾಡಬೇಕು ಅಂತ ಪ್ರಯತ್ನ ಪಡುತ್ತೇನೆ ಎಂದು ಹೇಳಿದ್ರು. ಕುಮಾರಸ್ವಾಮಿ ಇದ್ದಾರೆ, ಇಬ್ರಾಹಿಂ ಸೇರಿದಂತೆ ಸಮರ್ಥ ನಾಯಕರು ಇದ್ದಾರೆ . ಕಾರ್ಯಕ್ರಮ ಮುಂದೂಡುವ ಅವಶ್ಯಕತೆ ಇಲ್ಲ. ಇನ್ನು ಮುಂದಕ್ಕೆ ಪಂಚರತ್ನ ಕಾರ್ಯಕ್ರಮವನ್ನ ಜನರ ಮನಸ್ಸಿಗೆ ಕೊಂಡೊಯ್ಯಬೇಕು. ಸಮಸ್ತ ಜನಕ್ಕೆ ಜಾತಿ ಭೇದ ಇಲ್ಲದೆ ಪಂಚರತ್ನ ಯೋಜನೆಯನ್ನು ತಲುಪಿಸುತ್ತೇವೆ. ವಿದ್ಯಾಭ್ಯಾಸ ಆರೋಗ್ಯ ಪ್ರತಿಯೊಂದು ಮನೆ ಮನೆಗೂ ಮುಟ್ಟಿಸುತ್ತೇವೆ ಎಂದು ಹೆಚ್. ಡಿ ದೇವೇಗೌಡ ತಿಳಿಸಿದ್ದಾರೆ.
ಇದನ್ನೂ ಓದಿ : – ವೈದ್ಯರ ಸಲಹೆ ಪಡೆದು ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಪ್ರಗತಿ ಬಗ್ಗೆ ಅಧಿಕಾರಿಗಳ ಜೊತೆಗೆ ವೀಡಿಯೋ ಸಂವಾದ – ಕೋಟಾ ಶ್ರೀನಿವಾಸ್ ಪೂಜಾರಿ