ಸಾರ್ವಜನಿಕರು ಬುಡುಬುಡಿಕೆ ವೇಷಧಾರಿಗೆ ಧರ್ಮದೇಟು ಹಾಕಿರುವ ಘಟನೆ ಕೊಪ್ಪಳ (Koppal) ದ ಗಡಿಯಾರ ಕಂಬದ ಬಳಿ ನಡೆದಿದೆ. ಇಬ್ಬರು ಬುಡುಬುಡಿಕೆ ವೇಷಧಾರಿಯನ್ನು ಹಿಡಿದು ಸ್ಥಳೀಯರು ಪೊಲೀಸ (Police) ರಿಗೆ ಒಪ್ಪಿಸಿದ್ದಾರೆ. ಒಂಟಿ ಮಹಿಳೆಯರಿರುವ ಮನೆಗಳನ್ನ ಟಾರ್ಗೆಟ್ ಮಾಡಿ ವಂಚನೆ ಮಾಡ್ತಿದ್ದರು.
ಇಲ್ಲ ಸಲ್ಲದ್ದನ್ನು ಹೇಳಿ ಖದೀಮರು ಹಣ ಕೇಳುತ್ತಿದ್ದರು. ಸ್ಥಳೀಯರು ಬುಡುಬುಡಿಕೆಯವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಈ ವೇಳೆ ಹಣ ಪಡೆದಿರುವುದನ್ನು ಬುಡುಬುಡಿಕೆಯವರು ಒಪ್ಪಿಕೊಂಡಿದ್ದಾರೆ. ಮಹಿಳೆಯರಿಂದ ಬುಡುಬುಡಿಕೆಯವರು ಹಣ ಲಪಟಾಯಿಸಿದ್ದಾರೆ. ಬುಡುಬುಡಿಕೆಯವರ ಕುರಿತು ನಗರ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬುಡಬುಡಕಿಯವರ ಕೈ ಚೀಲದಲ್ಲಿ ಹಣದ ಕಂತೆ ಪತ್ತೆಯಾಗಿತ್ತು. ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಮೋಸ ಮಾಡಿ ವಂಚಕರು ಹಣ ದೋಚಿದ್ದಾರೆ.
ಇದನ್ನೂ ಓದಿ : – ಕೊಪ್ಪ ಲವ್ ಜಿಹಾದ್ ಪ್ರಕರಣ – ನಾಲ್ವರ ವಿರುದ್ಧ ದೂರು ನೀಡಿದ ಯುವತಿ