ಶಿವಪುರ ಸತ್ಯಾಗ್ರಹ ಸೌಧ (Shivapura soudha) ದ ಸಮಗ್ರ ಅಭಿವೃದ್ಧಿ ನನ್ನ ಗುರಿ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha ambareesh) ಭರವಸೆ ನೀಡಿದ್ದಾರೆ. ಮಂಡ್ಯ (Mandya) ಜಿಲ್ಲೆಯ ಶಿವಪುರ ಸತ್ಯಾಗ್ರಹ ಸೌಧ ಸಭೆಯಲ್ಲಿ ಮಾತನಾಡಿದ ಅವರು ಇತಿಹಾಸವುಳ್ಳ ಸತ್ಯಾಗ್ರಹ ಸೌಧ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣಿಲ್ಲ.
ನಾನು ಇದರ ಬಗ್ಗೆ ಹಲವು ಮನವಿ ಕೊಟ್ಟಿದ್ದೇನೆ. ಇತಿಹಾಸ ಸ್ಮಾರಕವನ್ನ ರಾಷ್ಟ್ರ ಮಟ್ಟದಲ್ಲಿ ಉಳಿಸಬೇಕು ಎಂದು ಹೇಳಿದ್ರು. ಪ್ರವಾಸಿ ತಾಣವಾಗಿ ಮಾಡಬೇಕು,ಇತಿಹಾಸ ಉಳಿಸಬೇಕು. ಸ್ವಾತಂತ್ರ್ಯದ ಇತಿಹಾಸ ಇರುವಂತಹ ಸೌಧ. ಇದರ ಸಮಗ್ರ ಅಭಿವೃದ್ಧಿ ಪಡಿಸುವುದೆ ನನ್ನ ಗುರಿ. ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗ ಅಭಿವೃದ್ಧಿ ಮಾಡ್ತೇನೆ. ನಿಮ್ಮಗಳ ಜೊತೆ ನಿರಂತರವಾಗಿ ನಾನು ಇರ್ತೇನೆ. ಶಿವಪುರ ಸತ್ಯಾಗ್ರಹ ಸೌಧದ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಇದನ್ನೂ ಓದಿ : – ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಬೇಡ – ಸಂತೋಷ್ ಲಾಡ್ ಅಭಿಮತ