ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ( prathap simha) ಮತ್ತು ಕಾಂಗ್ರೆಸ್ (congress) ನಡುವೆ ಕ್ರೆಡಿಟ್ ವಾರ್, ವಾಗ್ವಾದ ಮುಂದುವರೆದಿದೆ. ಈ ಮಧ್ಯೆ ಬಹಿರಂಗ ಚರ್ಚೆ ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ( m. lakshman) ದಿನಾಂಕ ನಿಗದಿ ಮಾಡಿದ್ದರು.
ಅಂತೆಯೇ ಕಾಂಗ್ರೆಸ್ ಕಚೇರಿ ಆವರಣದಿಂದ ಸಂಸದ ಪ್ರತಾಪ್ ಸಿಂಹ ಕಚೇರಿವರೆಗೆ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕತ್ತೆ ಜೊತೆ ಮೆರವಣಿಗೆ ಹೊರಡುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನ ಪೊಲೀಸರು ತಡೆದಿದ್ದಾರೆ. ಇದನ್ನೂ ಓದಿ : – ಎಷ್ಟು ಬೇಗ ಮೋದಿ ತೊಲಗುತ್ತಾರೋ ಅಷ್ಟು ಬೇಗ ನಮ್ಮ ದೇಶ ಸುಧಾರಣೆ ಆಗುತ್ತೆ – ಸಿದ್ದರಾಮಯ್ಯ
ಸಂಸದ ಪ್ರತಾಪ್ ಸಿಂಹ ವಿಪಕ್ಷ ನಾಯಕ ಸಿದ್ದರಾಮಯ್ಯ, (siddaramaiah) ಮಾಜಿ ಸಚಿವ ಹೆಚ್.ಸಿ ಮಹದೇವಪ್ಪರನ್ನ ಪಂಥಾಹ್ವಾನಕ್ಕೆ ಕರೆದಿದ್ದರು. ಪ್ರತಾಪ್ ಸಿಂಹ ಸವಾಲಿಗೆ ತಮ್ಮ ಪಕ್ಷದ ವಕ್ತಾರ ಲಕ್ಷ್ಮಣ್ ರನ್ನ ಕಳುಹಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ರು.
ಸಿದ್ದು ಸೂಚನೆಯಂತೆ ಪ್ರತಾಪ್ ಸಿಂಹ ಜೊತೆ ಚರ್ಚೆಗೆ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಮುಂದಾಗಿದ್ದರು. ಚರ್ಚೆಗೆ ಬರುತ್ತಿದ್ದ ಲಕ್ಷ್ಮಣ್ ರನ್ನ ಪ್ರತಾಪ್ ಸಿಂಹ ಹಂದಿ ಕತ್ತೆ ಎಂದಿದ್ದರು. ಪ್ರತಾಪ್ ಸಿಂಹ ಹಂದಿ ಕತ್ತೆ ಎಂದ ಹಿನ್ನೆಲೆಯಲ್ಲಿ ಇಂದು ಮತ್ತೆ ಸಂಸದರ ಜೊತೆ ಮೈಸೂರು (mysore) ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಮುಂದಾಗಿರೋ ಲಕ್ಷ್ಮಣ್ ಹಂದಿ, ಕತ್ತೆಗಳೊಂದಿಗೆ ಸಂಸದರ ಕಚೇರಿಗೆ ತೆರಳಲು ಮುಂದಾಗಿದ್ದರು.
ಇದನ್ನೂ ಓದಿ : – ನ್ಯಾಯಾಂಗ ನಿಂದನೆ ಪ್ರಕರಣ – ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ- ಸುಪ್ರೀಂ ಕೋರ್ಟ್ ಆದೇಶ