ಶಾಲೆಗಳಿಗೆ ಕೇಸರಿ ( KESARI ) ಬಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಲೀಂ ಅಹಮ್ಮದ್ (Salim Ahmed) ಪ್ರತಿಕ್ರಿಯೆ ನೀಡಿದ್ದಾರೆ.
ಆಪರೇಷನ್ ಲೋಟಸ್ ನಿಂದ ಬಂದ ಸರ್ಕಾರ 3 ವರ್ಷ ಇದೇ ಮಾಡ್ತಾ ಇದೆ. ಕೇಸರಿ ಪೇಂಟ್ ಹೊಡಿಬೇಕು ಅಂತ ಹೇಳ್ತಿದ್ದಾರೆ. ನಾಚಿಕೆ ಆಗಬೇಕು ಇವರಿಗೆ. ಶಾಲಾ ಸಮಸ್ಯೆ ಬಗೆಹರಿಸೋದು ಬಿಟ್ಟು ಪೇಂಟ್ ಬಳಿತಾರಂತೆ. ಪ್ರತಿ ಹಂತದಲ್ಲಿ ಕೇಸರಿಕರಣ ಮಾಡಲು ಹೊರಟಿದ್ದಾರೆ ಇವರು ಎಂದು ಬಿಜೆಪಿ ಸರಕಾರದ ವಿರುದ್ದ ಕಿಡಿಕಾರಿದ್ರು. ಇದನ್ನೂ ಓದಿ : – ಎಲ್ಲದರಲ್ಲೂ ರಾಜಕಾರಣ ಮಾಡುವಂತದ್ದು ಸರಿಯಲ್ಲ – ಸಿಎಂ ಬೊಮ್ಮಾಯಿ
ಗುಂಬಾಜ್ ಮಾದರಿಯ ಬಸ್ ಶೆಲ್ಟರ್ ಒಡೆದು ಹಾಕುವ ಪ್ರತಾಪ್ ಸಿಂಹ ಹೇಳಿಕೆ ವಿಚಾರ
ಪ್ರತಾಪ್ ಸಿಂಹ ( prathap simha ) ನಿಗೆ ಜ್ಞಾನ ಇರಬೇಕು ಏನು ಮಾತಾಡ್ತೀನಿ ಅಂತ. ಸರ್ಕಾರಿ ಬಿಲ್ಡಿಂಗ್ ಇದಾವೆ ಅದೆಲ್ಲವನ್ನೂ ಒಡೆದಾಕ್ತಾರಾ..? ಅದಕ್ಕೆ ಹೇಳಿಕೆ ಕೊಡಲಿ ನೋಡೋಣ. ಜನ ಬೇಸತ್ತಿದ್ದಾರೆ ಇವರ ಆಡಳಿತಕ್ಕೆ. ಯಾವುದೇ ಅಭಿವೃದ್ಧಿ ಆಗ್ತಾ ಇಲ್ಲ. ಅವರ ಮಾಹಿತಿ ಪ್ರಕಾರ ಬಿಜೆಪಿ 65 ಸೀಟು ಗೆಲ್ಲಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಅಂತ ಗೊತ್ತಿದೆ. ಕಾಂಗ್ರೆಸ್ ಗೆ ಕೇಸರಿ ಕಂಡರೆ ಭಯ ಇಲ್ಲ ಗೌರವ ಇದೆ. ಮಕ್ಕಳ ಮನಸಲ್ಲಿ ಇದನ್ನು ಬಿತ್ತಬಾರದು ಎಂದು ಹೇಳಿದ್ರು.
ಇದನ್ನೂ ಓದಿ : – ನನ್ನ ವಿರುದ್ದ ಸ್ಪರ್ಧೆ ಮಾಡಿದ್ರೆ ಜನ ಸಿದ್ದರಾಮಯ್ಯಗೆ ಬೈತಾರೆ – ವರ್ತೂರು ಪ್ರಕಾಶ್