ಅರಮನೆ ನಗರಿ ಮೈಸೂರು (Mysuru) ಜಿಲ್ಲೆ ಹೆಚ್.ಡಿ.ಕೋಟೆ (HD.Kote) ಯಲ್ಲಿ ಬಿಜೆಪಿಗೆ ರೌಡಿಯೊಬ್ಬ ಸೇರ್ಪಡೆಯಾಗಿದ್ದಾನೆ. ಕುಖ್ಯಾತ ರೌಡಿ ಶೀಟರ್ ಬೆತ್ತನಗೆರೆ ಶಂಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಹಾಗೂ ಬಿಜೆಪಿ (BJP) ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ನೇತೃತ್ವದಲ್ಲಿ 2022ರ ಮೇ ತಿಂಗಳಲ್ಲಿ ಬೆತ್ತನಗೆರೆ ಶಂಕರ (Bettanagere Shankar), ನೆಲ್ಲೂರು ಶಂಕರೇಗೌಡ ಎಂದು ಬದಲಾಯಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದಾನೆ.
ರೌಡಿ ಶೀಟರ್ ಬೆತ್ತನೆಗೆರೆ ಶಂಕರ್ (Shankar) ಗೆ ಮಣೆ ಹಾಕಿದ್ದು ಯಾರು ? ಬಿಜೆಪಿ ಪಕ್ಷಕ್ಕೆ ಶಂಕರ್ ಕರೆತಂದವರು ಯಾರು? ಹೆಚ್.ಡಿ.ಕೋಟೆ ಬಿಜೆಪಿ ಟಿಕೆಟ್ ಗಿಟ್ಟಿಸೋಕೆ ಈ ಪ್ಲಾನ್ ಮಾಡಿದ್ರಾ? ಶಂಕರ್ ಜೊತೆ ಸ್ಥಳೀಯ ನಾಯಕ ಪಾಪಣ್ಣ ಮಾತುಕತೆ ನಡೆಸಿದ್ರಾ? ಅದಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಸಾಥ್ ನೀಡಿದ್ರಾ? ಅಂತರಸಂತೆ ಜಿಲ್ಲಾಪಂಚಾಯತ್ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ರಾ? ಈ ಮೂಲಕ ಶಂಕರನನ್ನ ಬೆಂಗಳೂರಿನ ಬೆತ್ತನಗೆರೆಯಿಂದ ಹೆಚ್.ಡಿ.ಕೋಟೆಗೆ ಕರೆತಂದಿದ್ರಾ? ಎಂಬ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ : – ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 15 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಮೊನ್ನೆಯಷ್ಟೇ ಮೈಸೂರಿನಲ್ಲಿ ಶಂಕರ್ ಪಕ್ಷ ಸೇರಿದ್ದರು. ಶಂಕರ್ ಸೇರ್ಪಡೆಗೆ ಬಿಜೆಪಿ ಹಿರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : – ರಾಯರ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ