ಮೈಸೂರು ( mysuru ) ಅರಮನೆಯಲ್ಲಿ ಆಯುಧಪೂಜೆಯ ಪೂಜಾ ಕೈಂಕರ್ಯ ಆರಂಭವಾಗಿದ್ದು, ಆನೆಬಾಗಿಲು ಮೂಲಕ ಪಟ್ಟದ ಆನೆ, ಕುದುರೆ, ಹಸುಗಳು ಬಂದಿವೆ. ಪಾರಂಪರಿಕ ಆಯುಧ ಪಲ್ಲಕ್ಕಿಯನ್ನು ರಾಜವಂಶಸ್ಥರು, ಅರಮನೆ ಸಿಬ್ಬಂದಿ ನೇತೃತ್ವದಲ್ಲಿ ತರಲಾಯಿತು. ಕೋಡಿಸೋಮೇಶ್ವರ ದೇಗುಲದಲ್ಲಿ ಪಾರಂಪರಿಕ ಆಯುಧಗಳನ್ನು ಅಲಂಕರಿಸಿದ ರಾಜಪುರೋಹಿತರು ವಿಶೇಷ ಪೂಜೆ ನೆರವೇರಿಸಿದ್ರು.
ಈ ಹಿನ್ನೆಲೆಯಲ್ಲಿ ಮಾವುತರಿಗೆ ಭರ್ಜರಿ ಭೋಜನವನ್ನು ಶೋಭಾ ಕರಂದ್ಲಾಜೆಯವರು ಏರ್ಪಡಿಸಿದ್ದರು. ಹಾಗೂ ಎಲ್ಲಾ ಮಾವುತರಿಗೆ ಮತ್ತು ಮಾವುತರ ಕುಟುಂಬದವರಿಗೆ ಸ್ವತಃ ಅವರೇ ಊಟ ಬಡಿಸಿದ್ದು ವಿಶೇಷವಾಗಿತ್ತು. ಶೋಭಾ ಕರಂದ್ಲಾಜೆಗೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಸಾಥ್ ನೀಡಿದ್ರು. ಇದನ್ನೂ ಓದಿ :- ಬ್ಯಾನ್ ಬೆನ್ನಲ್ಲೇ ರಸ್ತೆ ಮೇಲೆ ಪಿಎಫ್ಐಯಿಂದ ಹಿಂದೂಗಳಿಗೆ ಎಚ್ಚರಿಕೆಯ ಬರಹ
ನಾಳೆ ಜಂಬೂ ಸವಾರಿ ಹಿನ್ನೆಲೆ 750 ಕೆಜಿ ಅಂಬಾರಿಯನ್ನು ಹೊತ್ತೊಯ್ಯುವ ಆನೆ ಅಭಿಮನ್ಯುಗೆ ಶೋಭಾ ಕರಂದ್ಲಾಜೆ ಪೂಜೆಯನ್ನು ಸಲ್ಲಿಸಿದ್ದಾರೆ. ಆನೆಗಳಿಗೆ ವಿಶ್ರಾಂತಿ ನೀಡಿರುವ ಸಮಯದಲ್ಲಿ ಶೋಭಾ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ :- ಪರೇಶ್ ಮೇಸ್ತನ ಸಾವಿನ ಸಿಬಿಐ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ – ಸಿದ್ದರಾಮಯ್ಯ