ಸಿಎಂ ಬಸವರಾಜ್ ಬೊಮ್ಮಾಯಿ ( basavaraj bommai )ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ( b.s yediurappa ) ಇಂದು ರಾಯಚೂರಿ ( raichuru ) ಗೆ ತೆರಳಿ ಮಂತ್ರಾಲಯದ ರಾಯರ ದರ್ಶನವನ್ನು ಪಡೆದಿದ್ದಾರೆ.
ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀಗಳಿಂದ ಆಶೀರ್ವಾದ ಪಡೆದ್ದಾರೆ. ರಾಯರ ದರ್ಶನ ಬಳಿಕ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ನವರು, ರಾಯರ ಆಶೀರ್ವಾದ ಪಡೆಯಲು ಮಂತ್ರಾಲಯಕ್ಕೆ ಬಂದಿದ್ದೇವೆ.
ಗುರುಗಳ ಆಶಿರ್ವಾದ ಪಡೆದು ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ರಾಯರ ಆಶಿರ್ವಾದದಿಂದ ರಾಜ್ಯದಲ್ಲಿ 150 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ. ರಾಯರ ಆಶಿರ್ವಾದ ಜನರ ಆಶಿರ್ವಾದ ದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಇದನ್ನೂ ಓದಿ :- ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ವೈಜ್ಞಾನಿಕ ತನಿಖೆ ಮನವಿಗೆ ಆಕ್ಷೇಪ – ಅಕ್ಟೋಬರ್ 14ಕ್ಕೆ ವಿಚಾರಣೆ ಮುಂದೂಡಿಕೆ
ಬೇರೆ ಪಕ್ಷದಿಂದ ಯಾರ್ಯಾರು ಬರುತ್ತಿದ್ದಾರೆ ನನಗೆ ಗೊತ್ತಿಲ್ಲ ಅದು ಅಲ್ಲಿನ ಮುಖಂಡರಿಗೆ ಗೊತ್ತು. ಪ್ರತಾಪ ಗೌಡರಿಗೆ ಸ್ಥಾನಮಾನ ಕುರಿತು ಅವರನ್ನ ಕರೆದು ಮಾತನಾಡುತ್ತೇನೆ ಎಂದು ಹೇಳಿದ್ರು.
ಇದನ್ನೂ ಓದಿ :- ಮೋದಿ-ಅಮೀತ್ ಶಾ ಜೋಡಿಯಂತೆ ನಮ್ಮಲ್ಲಿ ಬಿಎಸ್ ವೈ-ಬೊಮ್ಮಾಯಿ ಜೋಡಿಯಿದೆ – ಶ್ರೀ ರಾಮುಲು