ಈಜಾಡಲು ಹೋಗಿ ಕೆರೆನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ವಿಜಯನಗರ ( vijaya nagara ) ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ತೆಲಗಿ ಗ್ರಾಮದ ಕೆರೆಯಲ್ಲಿ ನಡೆದಿದೆ. ಅಮರ್ (19), ಚಂದ್ರು (19), ಸಾವನ್ನಪ್ಪಿದ ಯುವಕರು. ರಜೆ ಇದ್ದ ಹಿನ್ನಲೆ ಕೆರೆಯಲ್ಲಿ ಈಜಾಡಲು ಹೋಗಿದ್ದ ಯುವಕರು. ಕೆರೆಯಲ್ಲಿ ಕೆಸರು ಇದ್ದ ಹಿನ್ನಲೆ ಕೆಸರಿನಲ್ಲಿ ಕಾಲು ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದಾರೆ. ಕೆರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಇಬ್ಬರು ಯುವಕರ ಮೃತ ದೇಹವನ್ನು ಹೊರತೆಗೆಯಲಾಗಿದೆ.
ಇನ್ನೂ ಸೆಲ್ಫಿ ಹುಚ್ಚಾಟಕ್ಕೆ ಕಾಲುವೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲ್ಲೂಕಿನ ಕಲ್ಮಲಾ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ. ಪಿಯುಸಿ ವಿದ್ಯಾರ್ಥಿಗಳಾದ ಸುಜಿತ್ ಹಾಗೂ ವೈಭವ್ ಮೃತರು. ಘಟನಾ ಸ್ಥಳದಿಂದ 200 ಮೀಟರ್ ದೂರದಲ್ಲಿ ಪತ್ತೆಯಾದ ಮೃತದೇಹಗಳು. ಮೃತರು ರಾಯಚೂರು ನಗರದ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿಗಳು.ಎರಡನೇ ಪಿಯುಸಿ ಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು. ನಿನ್ನೆ ಪಿಕ್ ನಿಕ್ ಗಾಗಿ ಕಾಲುವೆಗೆ ಹೋಗಿದ್ದ 4 ವಿದ್ಯಾರ್ಥಿಗಳ ತಂಡ. ಈ ವೇಳೆ ಕಾಲುವೆಯಲ್ಲಿ ಸೆಲ್ಫಿ ತೆಗೆಯೊ ದುಸ್ಸಾಹಸ ಮಾಡಿದ್ದಾರೆ. ಆಗ ಸೆಲ್ಫಿ ವೇಳೆ ಕಾಲುವೆಗೆ ಬಿದ್ದಿದ್ದ ನಾಲ್ಕು ಜನ ವಿದ್ಯಾರ್ಥಿಗಳು. ಈ ವೇಳೆ ಈಜಿ ದಡ ಸೇರಿದ್ದ ನಾಗೇಂದ್ರ ಹಾಗೂ ತರುಣ್. ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಸುಜಿತ್ ಹಾಗೂ ವೈಭವ್. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : – ಇಂದು ಬ್ರಿಟನ್ ಮಹಾರಾಣಿ ಎಲಿಜಬೆತ್ ಅಂತ್ಯಕ್ರಿಯೆ – ವಿಶ್ವದ ಹಲವು ಗಣ್ಯರು ಭಾಗಿ
ರಾಯಚೂರು ನಗರ ಬೈಪಾಸ್ ಬಳಿ ರಸ್ತೆ ಅಪಘಾತಕ್ಕೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೋರ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಬೈಪಾಸ್ ಹತ್ತಿರದ ಅಮರಾವತಿ ಕಾಲೋನಿ ಹತ್ತಿರ ಘಟನೆ ಜರುಗಿದೆ. ಹೈದರಾಬಾದ್ ನಿಂದ ಕಾರಟಗಿ ಹತ್ತಿರ ಚೆನ್ನಳ್ಳಿ ಕ್ಯಾಂಪ್ ಗೆ ಹೊರಟಿದ್ದ ಕಾರು. ಹೆದ್ದಾರಿಯಲ್ಲಿ ಆಕಳು ಅಡ್ಡ ಬಂದಿದ್ದರಿಂದ ಬ್ರೇಕ್ ಹಾಕಿದ್ದಾರೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ.
ಇದನ್ನೂ ಓದಿ : – ನೀವು ಬರಲಿಲ್ಲ ಅಂದರೆ ಸಿದ್ದರಾಮಯ್ಯ ಮರ್ಯಾದೆ ಹೋಗುತ್ತದೆ – ಡಿ.ಕೆ ಶಿವಕುಮಾರ್