ಕಾಂಗ್ರೆಸ್ ಅಪರೂಪಕ್ಕೆ ಒಳ್ಳೆ ವಿಚಾರಗಳ ಬಗ್ಗೆ ಮಾತನಾಡ್ತಿದ್ದಾರೆ – ಅಶ್ವಥ್ ನಾರಾಯಣ್

ಓಟರ್ ಐಡಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ( ASHWATH NARAYAN ) ಪ್ರತಿಕ್ರಯೆ ನೀಡಿದ್ದಾರೆ.

ಓಟರ್ ಐಡಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ( ASHWATH NARAYAN ) ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದಲ್ಲಿ ಎಲ್ಲರ ಮೇಲೂ ತನಿಖೆ ಆಗಲಿ. ಮತದಾರರ ಮಾಹಿತಿ ದುರ್ಬಳಕೆ ಆಗಿದ್ದರೆ ಕ್ರಮ ಆಗಲಿ. ಕಾಂಗ್ರೆಸ್ ಅಪರೂಪಕ್ಕೆ ಒಳ್ಳೆ ವಿಚಾರಗಳ ಬಗ್ಗೆ ಮಾತನಾಡ್ತಿದ್ದಾರೆ. ಪಾರದರ್ಶಕ ತನಿಖೆಗೆ ನಾನೂ ಕೂಡಾ ಸಿಎಂಗೆ ಒತ್ತಾಯಿಸುತ್ತೇನೆ. ಈಗ ಓಟರ್ ಐಡಿ ಬಗ್ಗೆ ಮಾತನಾಡಲು ಎದ್ದುನಿಂತಿರೋ ಮಹಾನ್ ನಾಯಕರು ಪ್ರಾಮಾಣಿಕವಾಗಿ ಒಳ್ಳೆಯ ರೀತಿ ಕೆಲಸ ಮಾಡಿದ್ದಾರಾ.? ಮಾಡಿದ್ದರೆ ಇಂತಹ ಸಮಸ್ಯೆಗಳು ಇರ್ತಿದ್ವಾ.?

ಈಗ ಮಾತನಾ ಡುವ ಮಹಾನುಭಾವರು ಮಾಡಿರುವ ಕೆಟ್ಟ ಕೆಲಸ, ಕಾನೂನು ಬಾಹಿರ ಚಟುವಟಿಕೆ, ನಡೆದುಬಂದ ಹಾದಿಯನ್ನ ಅವಲೋಕಿಸಲಿ. ಅದೆಲ್ಲವನ್ನ ತನಿಖೆ ಮಾಡಿದ್ರೆ ಸತ್ಯ ಹೊರಬರಲಿದೆ. ನಾವು ಪಾರದರ್ಶಕವಾಗಿ ಬದುಕಿದ್ದೇನೆ. ಎಲ್ಲಾ ತನಿಖೆಗೂ ನಾನು ಸಿದ್ದನಿದ್ದೇನೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ( CONGRESS ) ಅಸಹಾಯಕ ಸ್ಥಿತಿಯಲ್ಲಿದೆ. ಅಡ್ಡದಾರಿ ಹಿಡಿದು ಚುನಾವಣೆ ನಡೆಸಬೇಕಾದ ಪರಿಸ್ಥಿತಿ ಅವರಿಗಿದೆ. ಸಂಪೂರ್ಣ ತನಿಖೆ ನಡೆಸಿದ್ರೆ ಕಾಂಗ್ರೆಸ್ ನವರು ಬಯಲಿಗೆ ಬರ್ತಾರೆ. ಇದ್ದಕ್ಕಿದ್ದಂತೆ ಈ ರೀತಿಯ ವಿಚಾರ ಉದ್ಭವ ಮಾಡ್ತಾರೆ. ಷಡ್ಯಂತ್ರ, ಕುತಂತ್ರಗಳನ್ನ ಮಾಡ್ತಿದ್ದಾರೆ. ಕಾಂಗ್ರೆಸ್ ನ ಎಲ್ಲಾ ಆಟಗಳನ್ನು ಜನ ನೋಡ್ತಿದ್ದಾರೆ. ಅಶ್ವಥ್ ನಾರಾಯಣ್ ಮೇಲೆ ಮಾಡ್ತಿರುವ ಆರೋಪಗಳನ್ನು ನೋಡ್ತಿದ್ದಾರೆ. ಅವರೇ ಉತ್ತರ ಕೊಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ರು.
ಓಟರ್ ಐಡಿ ಪ್ರಕರಣದಲ್ಲಿ ಅಶ್ವಥ್ ನಾರಾಯಣ್ ಏಕಾಂಗಿ ವಿಚಾರವಾಗಿ ಮಾತನಾಡಿದ ಅವರು, ಪಕ್ಷದಲ್ಲಿ ನಾನು ಏಕಾಂಗಿಯಾಗಿರುವ ಪ್ರಶ್ನೆಯೇ ಇಲ್ಲ. ನನ್ನ ಶಕ್ತಿ ಮೇಲೆ ಭರವಸೆ ಇದೆ. ಎಲ್ಲವನ್ನೂ ಸ್ವಾಗತಿಸುತ್ತೇನೆ ಎಂದು ತಿಳಿಸಿದ್ರು.

ಇದನ್ನೂ ಓದಿ : –  ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಗೆ ಕ್ಷಮೆ ಕೇಳಿದ ಕುಮಾರಸ್ವಾಮಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!