ಈ ಬಾರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ( h.d kumarswamy ) ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲೇ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರ ನನ್ನ ಎರಡೂ ಕಣ್ಣುಗಳಿದ್ದ ಹಾಗೇ, ಕಳೆದ ಬಾರಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಆದರೆ ಈ ಬಾರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದ್ದಾರೆ. ನಾನು ಸ್ಪರ್ಧೆ ಮಾಡೋ ಕ್ಷೇತ್ರದ ಬಗ್ಗೆ ಯಾವುದೇ ಗೊಂದಲ ಇಲ್ಲ. ಟೂರಿಂಗ್ ಟಾಕೀಸ್ ತರ ಒಂದೊಂದು ಚುನಾವಣೆಗೆ ಒಂದೊಂದು ಕ್ಷೇತ್ರಕ್ಕೆ ನಾನು ಹೋಗಲ್ಲ. ನಮ್ಮ ಪಕ್ಷದಲ್ಲಿ ಆ ರೀತಿಯ ವಾತಾವರಣ ಇಲ್ಲ. ಮಾಗಡಿಯಿಂದ ಸ್ಪರ್ಧೆಗಿಳಿಯುವಂತೆ ಕೆಲವರು ಒತ್ತಡ ಹೇರಿದ್ರು. ಆದ್ರೆ ಈ ಬಗ್ಗೆ ನಾನು ಈಗಾಗಲೇ ಸ್ಪಷ್ಟ ತೀರ್ಮಾನ ಮಾಡಿದ್ದೇವೆ ಹೇಳಿದ್ದಾರೆ. ಇದನ್ನೂ ಓದಿ : – ರಾಯನ್ ರಾಜ್ ಸರ್ಜಾಗೆ ಇಂದು 3ನೇ ವರ್ಷದ ಬರ್ತ್ ಡೇ ಸಂಭ್ರಮ
ಸಿಪಿವೈ ಹೆಸರು ಹೇಳದೇ ಹೆಚ್ಡಿಕೆ ಟಾಂಗ್
ನಾವು ದೇವೇಗೌಡರ ಕಾಲದಿಂದ ಪಕ್ಷ ಕಟ್ಟಿದ್ದೇವೆ. ತಾಲೂಕಿನಲ್ಲಿ ಪಕ್ಷ ಸಂಘಟನೆ ಬಗ್ಗೆ ಅನುಮಾನ ಬೇಡ . ಈ ವಿಚಾರದಲ್ಲಿ ನಮಗೆ ಜವಾಬ್ದಾರಿ ಕೊಡಿ ಅಂತ ಮುಖಂಡರೇ ಹೇಳಿದ್ದಾರೆ. ನಿನ್ನೆ ಇದೇ ವಿಚಾರವಾಗಿ ರಾತ್ರಿ 8 ಗಂಟೆವರೆಗೂ ಸುದೀರ್ಘ ಸಭೆಯಾಗಿದೆ. ಈಗಾಗಲೇ ಅಭಿವೃದ್ಧಿ ಕೆಲಸ ಮಾಡಿರುವ ಕಿರು ಹೊತ್ತಿಗೆಯನ್ನ ಪ್ರತಿ ಮನೆಗೆ ತಲುಪಿಸುತ್ತೇವೆ ಎಂದು ಸಿಪಿವೈ ಹೆಸರು ಹೇಳದೇ ಹೆಚ್ಡಿಕೆ ಟಾಂಗ್ ನೀಡಿದ್ರು.
ನಾನು ಕಲ್ಲು ಹಾಕಿಸಿಕೊಳ್ಳುವಂತಹ ಕೆಲಸ ಮಾಡಿಕೊಂಡಿಲ್ಲ. ಸಣ್ಣ ಸಣ್ಣ ಕೆಲಸಗಳಿಗೂ ಕಲ್ಲಿನ ಮೇಲೆ ನನ್ನ ಹೆಸರು ಹಾಕಿಸಿಕೊಳ್ಳುವವನಲ್ಲ. ಚನ್ನಪಟ್ಟಣ ಕ್ಷೇತ್ರ ಅಷ್ಟೇ ಅಲ್ಲ. ರಾಜ್ಯದ ಜನರ ಹೃದಯದಲ್ಲಿ ಹೆಸರು ಇರಬೇಕು.ಅಂತಹ ಕೆಲಸ ಮಾಡುವ ಮನೋಭಾವನೆ ಹೊಂದಿರುವೆ. ನನ್ನ ಕೆಲಸಗಳು ಯಾವುದೋ ಕಲ್ಲಿನ ಮೇಲೆ ಇರಬೇಕು ಅಂತ ಇಚ್ಛಿಸುವುದಿಲ್ಲ. ರಾಜ್ಯದಲ್ಲಿ ಒಂದು ಸ್ವತಂತ್ರ ಸರ್ಕಾರ ತರಲು ಸವಾಲು ಸ್ವೀಕಾರ ಮಾಡಿದ್ದೇವೆ. ನಮ್ಮ ರಾಜ್ಯಾಧ್ಯಕ್ಷರಾದ ಸಿ.ಎಂ ಇಬ್ರಾಹಿಂ ನೇತೃತ್ವದಲ್ಲಿ ಆ ಕೆಲಸ ಮುಂದುವರೆಸುತ್ತೇನೆ ಎಂದು ಹೇಳಿದ್ರು.
ಸರ್ಕಾರಿ ಶಾಲೆಗಳಲ್ಲಿ ಪೋಷಕರಿಂದ ಹಣ ವಸೂಲಿ ಸುತ್ತೋಲೆ ವಿಚಾರ
ಸುತ್ತೋಲೆಯನ್ನ ತಕ್ಷಣವೇ ಹಿಂಪಡೆಯ ಬೇಕು. ಇದು ಸರ್ಕಾರದ ಅತ್ಯಂತ ಕೆಟ್ಟ ನಿರ್ಧಾರ. ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯವನ್ನು ಕೊಡೋದು ಬಿಟ್ಟು ಪೋಷಕರಿಂದಲೇ ಚಂದಾ ವಸೂಲಿಗೆ ಹೊರಟಿದ್ದಾರೆ. ಇಂತಹ ತೀರ್ಮಾನ ನೋಡಿದ್ರೆ ಸರ್ಕಾರದ ದಿವಾಳಿತನ ತೋರುತ್ತೆ ಎಂದು ಹೇಳಿದ್ರು.
ಇದನ್ನೂ ಓದಿ : – ರಾಹುಲ್ ಗಾಂಧಿ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ – ಶೋಭಾ ಕರಂದ್ಲಾಜೆ