ಈ ತಾಲ್ಲೂಕು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿಯಾಗಬೇಕಿತ್ತು. ಆದರೆ ಇಲ್ಲಿನ ಜನಪ್ರತಿನಿಧಿಗಳು ನಿಮ್ಮನ್ನ ಓಟ್ ಬ್ಯಾಂಕ್ ಮಾಡಿ. ಈ ಕೊರಟಗೆರೆ ತಾಲ್ಲೂಕನ್ನ ಕತ್ತಲೆಯಲ್ಲಿಟ್ಟಿದ್ದಾರೆ ಎಂದು ತುಮಕೂರಿನ ಕೊರಟಗೆರೆ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ( basavaraj bommai ) ಹೇಳಿದ್ದಾರೆ.
ಜನ ಸಂಕಲ್ಪ ಯಾತ್ರೆ | ಕೊರಟಗೆರೆ, ತುಮಕೂರು ಜಿಲ್ಲೆ.#JanaSankalpaYatre @BJP4Karnataka https://t.co/WEIgPW2eXw
— Basavaraj S Bommai (@BSBommai) December 7, 2022
ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ. ಕಾಂಗ್ರೆಸ್ ಈ ಸುನಾಮಿಯಲ್ಲಿ ಕೊಚ್ಚಿ ಹೋಗುತ್ತದೆ. ನಾಳೆ ಗುಜರಾತ್, ಹಿಮಾಚಲಪ್ರದೇಶ ಚುನಾವಣೆ ಫಲಿತಾಂಶ ಬರುತ್ತೆ. ನಾಳೆ ಇಷ್ಟೊತ್ತಿಗೆ ವಿಜಯೋತ್ಸವ ಆಚರಣೆ ಮಾಡ್ತೇವೆ. ನೀವು ಕೂಡ ಮಾಡಬೇಕು. ಈ ವಿಜಯಯಾತ್ರೆ ಮುಂದೆ ಕರ್ನಾಟಕಕ್ಕೂ ಬರುತ್ತೆ. ಇದನ್ನು ಓದಿ : – ರಾಜಕೀಯ ಬಿಟ್ಟು ಕೂಲಿ ಮಾಡ್ತೀನಿ – ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರೋ ಮಾತೆ ಇಲ್ಲ – ಮುನಿರತ್ನ
ಇಂದು ತುಮಕೂರಿನ ಗೂಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಭಾರತೀಯ ಜನತಾ ಪಾರ್ಟಿಯ ನೂತನ ಕಛೇರಿ ಶಕ್ತಿಸೌಧವನ್ನು ಉದ್ಘಾಟಿಸಿ, ಮಾತನಾಡಿದೆನು.@BJP4Karnataka pic.twitter.com/H9Zn7XLCb9
— Basavaraj S Bommai (@BSBommai) December 7, 2022
ಈ ಜನಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆಯಾಗುತ್ತೆ. ಕಾಂಗ್ರೆಸ್ ( congress ) ನಿರ್ನಾಮ ಆಗುತ್ತೆ ಎಂದು ಕಿಡಿಕಾರಿದ್ರು. ಪರಮೇಶ್ವರ್ ಗೆ ಯಾರಾದ್ರು ವೈರಿಗಳಿದ್ರೆ ಅದು ಕಾಂಗ್ರೆಸ್ ನವರೇ. ಅದಕ್ಕೆ ಅವರನ್ನ ಸೋಲಿಸೋ ಕೆಲಸ ಕಾಂಗ್ರೆಸ್ ನವರೇ ಮಾಡ್ತಾರೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ. ನಿಮ್ಮ ಸರ್ಕಾರ ಇತ್ತು SC-ST ರಿಸರ್ವೇಶನ್ ಯಾಕೆ ಹೆಚ್ಚು ಮಾಡಲಿಲ್ಲ. ಖರ್ಗೆ ಹಾಗೂ ಸಿದ್ದರಾಮಯ್ಯ ಅವರನ್ನ ಕೇಳ್ತೇನೆ. ಹಿಂದುಳಿದ ವರ್ಗಗಳಿಗೆ ಏನ್ ಕೊಟ್ರಿ? ಸುಮಾರು 5000 ಕೋಟಿಯ ವಕ್ಫ್ ಪ್ರಾಪರ್ಟಿಯನ್ನ ಕಾಂಗ್ರೆಸ್ ನವರು ತಿಂದು ತೇಗಿದ್ದಾರೆ. ನಿಮಗ್ಯಾವ ನೈತಿಕತೆ ಇದೆ ಮುಸ್ಲಿಂ ಮತ ಕೇಳೋಕೆ. ಭಾರತ್ ಮಾತಾಕಿ ಜೈ ಬೇಕೋ, ಸೋನಿಯಾ ಮಾತಾಕಿ ಜೈ ಬೇಕೋ. ನೀವೇ ನಿರ್ಧಾರ ಮಾಡಿ.
ಕುಣಿಗಲ್ ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಈ ಭಾಗದಲ್ಲಿ ಪ್ರಮುಖವಾಗಿ ಆಗಲೇಬೇಕಾಗಿರುವ, ಮಾರ್ಕೋನಹಳ್ಳಿ ಜಲಾಶಯದಿಂದ ಮಂಗಳ ಜಲಾಶಯಕ್ಕೆ ನೀರು ಹರಿಸುವ ಹಾಗೂ ಹೇಮಾವತಿ ಕಾಲುವೆ ಮೂಲಕ ಕುಣಿಗಲ್ ತಾಲೂಕಿನ ಎಲ್ಲಾ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡುತ್ತೇವೆ.#JanaSankalpaYatre pic.twitter.com/miSXMruMDa
— Basavaraj S Bommai (@BSBommai) December 7, 2022
ಈ ಕ್ಷೇತ್ರದಿಂದ ಬಿಜೆಪಿ ಪ್ರತಿನಿಧಿ ವಿಧಾನಸೌಧಕ್ಕೆ ಬರಬೇಕು. ನಾವು ಪ್ರಾರಂಭ ಮಾಡಿದ ಎತ್ತಿನಹೊಳೆ ಯೋಜನೆ ನಾವೇ ಮುಗಿಸುತ್ತೇವೆ. ಕೊರಟಗೆರೆ ( koratagere ) ಯಲ್ಲಿ ಕಾಂಗ್ರೆಸ್ ನವರೇ ಕಾಂಗ್ರೆಸ್ ನ ಸೋಲಿಸ್ತಾರೆ. ಅದು ಪರಮೇಶ್ವರ್ ಗೂ ಗೊತ್ತಾಗಿದೆ. ನಾವು ಮನೆಮನೆಗೆ ಹೋಗಿ ಬಿಜೆಪಿಯನ್ನ ಗೆಲ್ಲಿಸೋ ಕೆಲಸ ಮಾಡೋಣ. ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ಬಾಹಿರ ಅಂದರು. ಏನ್ ಇವರೊಬ್ಬರೇ ಸಂವಿಧಾನ ಓದಿರೋದು. ಸುಪ್ರಿಂ ಕೋರ್ಟ್ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ಬದ್ದ ಅಂದರು. ಎಸಿಬಿ ಮಾಡಿ ಅನೇಕ ಕೇಸುಗಳನ್ನ ಮುಚ್ಚಿ ಹಾಕಿದ್ರು. ಈಗ ಲೋಕಾಯುಕ್ತ ಮಾಡಿ ಎಲ್ಲವನ್ನೂ ತನಿಖೆ ಮಾಡಿಸ್ತಿದ್ದೇವೆ. ಕೊರಟಗೆರೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಬೇರನ್ನ ಗಟ್ಟಿಗೊಳಿಸಿ ಎಂದು ಹೇಳಿದ್ರು.
ಇದನ್ನು ಓದಿ : – RR ನಗರದಲ್ಲಿ ಕಾಂಗ್ರೆಸ್ ಬೆಂಬಲಿತ ಮತ್ತು ಒಕ್ಕಲಿಗ ಮತದಾರ ಹೆಸರು ಡಿಲೀಟ್ – ಡಿ.ಕೆ ಸುರೇಶ್ ಗಂಭೀರ ಆರೋಪ