ತುಮಕೂರಿನಲ್ಲಿ KSRTC ಬಸ್ ಪಲ್ಟಿ –ಹುಬ್ಬಳ್ಳಿಯಲ್ಲಿ ಮೂವರು ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ ಟಿಸಿ ಬಸ್ (KSRTC) ಪಲ್ಟಿ ಹೊಡೆದು ಹಲವು ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ದೇವರಹೊಸಹಳ್ಳಿ ಬಳಿ ನಡೆದಿದೆ. ಬೆಂಗಳೂರು ಕಡೆಯಿಂದ ದಾವಣಗೆರೆಗೆ ಬಸ್ ಹೋಗುತಿತ್ತು.

ಏಕಾಏಕಿ ಬಸ್ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಬಸ್ ನಲ್ಲಿ 50 ಪ್ರಯಾಣಿಕರು ಇದ್ದರು.10-15 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿ, ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮೂವರು ದುರ್ಮರಣ
ಕಾರು ಪಲ್ಟಿ ಹೊಡೆದು ಮೂವರು ದುರ್ಮರಣ ಹೊಂದಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿರುವ ಘಟನೆ ಹುಬ್ಬಳ್ಳಿ (Hubballi) ಜಿಲ್ಲೆಯ ವರೂರ ಬಳಿ ನಡೆದಿದೆ. ದಾವಣಗೆರೆ (Davangere) ಯಿಂದ ಹುಬ್ಬಳ್ಳಿಯತ್ತ ಕಾರು ಬರುತ್ತಿತ್ತು. ಅತಿವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಇದನ್ನೂ ಓದಿ : – ಮಳೆ ಹಾನಿ ಪರಿಶೀಲನೆ- ಕೇಂದ್ರ ತಂಡ ‘ಬಂದ ಪುಟ್ಟ ಹೋದ ಪುಟ್ಟ’- ಕುಮಾರಸ್ವಾಮಿ

ದಾವಣಗೆರೆ ಮೂಲದ ಶಾರುಖ್, ಸೋಹೆಲ್ ಮತ್ತು ಚಿಕ್ಕಮಗಳೂರು ಮೂಲದ ಸುಶೀಲಾ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಹಿಳೆಯೊಬ್ಬರು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : –  ಕ್ವೀನ್ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!