ನನ್ನ ಅಪ್ಪನಾಣೆ ಇನ್ನೂ 5 ರ್ಷ ನಾನೇ MLA ಆಗಿರ್ತಿನಿ ಎಂದು ತನಗೆ ತಾನೇ ಭವಿಷ್ಯವನ್ನು ಗುಬ್ಬಿ ಜೆ.ಡಿ.ಎಸ್ ಉಚ್ಛಾಟಿತ ಶಾಸಕ ಎಸ್. ಆರ್ ಶ್ರೀನಿವಾಸ್ ( s.r srinivas ) ಹೇಳಿಕೊಂಡಿದ್ದಾರೆ. ತುಮಕೂರಿನ ಗುಬ್ಬಿ ತಾಲೂಕಿನ ಯಕ್ಕಲಕಟ್ಟೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವ ಜ್ಯೋತಿಶಾಸ್ತ್ರದವರು ನನ್ನ ಕುಂಡಲಿ ನೋಡಿದ್ರೆ ಉಚ್ಚೆ ಹುಯ್ ಕೊಂಡು ಓಡ್ತಾರೆ, ಹಂಗಿದೆ ನನ್ನ ಕುಂಡಲಿ.
ಯಾರ ಊಹೆಗೂ ನಿಲುಕದ್ದು ನನ್ನ ಭವಿಷ್ಯ. ಚುನಾವಣೆ ಹತ್ತಿರ ಬಂದಾಗ ಕಾಗೆ ಗೂಬೆಗಳೆಲ್ಲ ವೇಷ ಹಾಕಿಕೊಂಡು ಬರ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಆಮೇಲೆ MLA ಆದೋನು ನಾನು. ನಮ್ಮಪ್ಪರಾಣೆ ನಾನೇ ಮುಂದಿನ 5 ವರ್ಷ MLA ಆಗಿರುತ್ತಿನಿ. ನನ್ನನು ಸುಲಭವಾಗಿ ಸೋಲಿಸಿ ಬಿಡುತ್ತಿನಿ ಅಂದುಕೊಂಡರೆ ಅದು ಸಾಧ್ಯ ಇಲ್ಲ ಎಂದು ಹೇಳಿದ್ರು.
ಇದನ್ನೂ ಓದಿ :- ಗುಂಡಿ ತಪ್ಪಿಸುವ ಯತ್ನದಲ್ಲಿ ಕೆಳಗೆ ಬಿದ್ದಿದ್ದ ಉಮಾದೇವಿ ನಿಧನ