ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆ PFI ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ 5 ವರ್ಷ ಪಿಎಫ್ಐ ( PFI ) ಬ್ಯಾನ್ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶಿದೆ. ಈ ಹಿನ್ನೆಲೆಯಲ್ಲಿ ಇತ್ತ ಕರ್ನಾಟಕದಲ್ಲಿ ಪಿಎಫ್ಐ ಮುಖಂಡರನ್ನು ಬಂಧಿಸಿ, ಕಚೇರಿಗಳಿಗೆ ಬೀಗ ಹಾಕಲಾಗಿದೆ. ಹಾಗಾದ್ರೆ, ರಾಜ್ಯದಲ್ಲಿ ಇದುವರೆಗೆ ಎಷ್ಟು ಪಿಎಫ್ಐ ನಾಯಕರನ್ನು ಅರೆಸ್ಟ್ ಮಾಡಲಾಗಿದೆ? ಎಷ್ಟು ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ? ಎಂದು ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅಧಿಕೃತ ಅಂಕಿ-ಅಂಶಗಳನ್ನ ನೀಡಿದ್ದಾರೆ.
ತುಮಕೂರಿ ( TUMAKURU ) ನಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಈವರೆಗೆ 110 ಪಿಎಫ್ ಐ ಮುಖಂಡರನ್ನ ಬಂಧಿಸಲಾಗಿದೆ. 42 ಕಡೆ ಪಿಎಫ್ ಐ ಕಚೇರಿಗಳಿಗೆ ಬೀಗ ಮುದ್ರೆ ಹಾಕಲಾಗಿದ್ದು, ಕಚೇರಿಗಳಲ್ಲಿ ಲ್ಯಾಪ್ ಟಾಪ್ ಸೇರಿದಂತೆ ಇತರೆ ವಸ್ತುಗಳನ್ನ ವಶ ಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ. ವೈಯಕ್ತಿಕ ಅಕೌಂಟ್ ಗಳ ಬಗ್ಗೆ ಇಡಿ ಮತ್ತು ಎನ್ಐಎ ನೋಡುತ್ತಿದೆ. ಇಂದು ಬಂಟ್ವಾಳದಲ್ಲಿ ಪಿಎಫ್ಐ ಟ್ರೈನಿಂಗ್ ನೀಡುತ್ತಿದ್ದ ಕಟ್ಟಡವನ್ನ ಸೀಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ : – ಕೆರೆ ಕಾಮಗಾರಿ ಸರಿಯಾಗಿ ಮಾಡಿಲ್ಲ – ಕೋಲಾರ ಜಿಲ್ಲೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನಿರ್ಮಲಾ ಸೀತಾರಾಮನ್
ಇನ್ನು ಇದೇ ವೇಳೆ ಸಿದ್ದರಾಮಯ್ಯನವರು ಆರ್ಎಸ್ಎಸ್ ಬ್ಯಾನ್ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರಿಗೆ ಪಿಎಫ್ ಐ ಬ್ಯಾನ್ ಮಾಡಿದ್ದು ಇಷ್ಟೇ ಇಲ್ಲ, ಅವರಿಗೆ ದೇಶದ ಹಿತದೃಷ್ಟಿಗಿಂತ ವೋಟಿನ ಹಿತದೃಷ್ಟಿ ಮುಖ್ಯ. ಇದು ಚುನಾವಣೆ ವರ್ಷ ಆಗಿರೋದ್ರಿಂದ ಅವರ ವೋಟ್ ಬ್ಯಾಂಕಿಗೆ ಹಾನಿಯಾಗದೇ ರೀತಿಯಲ್ಲಿ ಮಾತನಾಡ್ತಾರೆ ಎಂದು ತಿರುಗೇಟು ನೀಡಿದರು.
RSS ಒಂದು ದೇಶಭಕ್ತ ಸಂಘಟನೆ. RSS ಸಂಘಟನೆಯನ್ನ ಇಡೀ ದೇಶದ ಜನ ಸ್ವೀಕಾರ ಮಾಡಿದ್ದಾರೆ. ದೇಶಕ್ಕೊಸ್ಕರ, ದೇಶಕ್ಕೆ ಪೂರಕವಾಗುವ ವ್ಯಕ್ತಿಗಳನ್ನ RSS ಪ್ರತಿದಿನ ಪ್ರತಿ ಶಾಖೆಗಳಲ್ಲಿ ಬೆಳೆಸುತ್ತಿದೆ.. ಪಿಎಫ್ ಐ ಮತ್ತು ಆರ್ ಎಸ್ ಎಸ್ ಗೆ ತಾಳೆ ಹಾಕುವುದು ಕೆಟ್ಟ ಮನಸ್ಥಿತಿಗೊಂದು ಉದಾಹರಣೆ. ಸಿದ್ದರಾಮಯ್ಯನವರ ಓಲೈಕೆ ರಾಜಕಾರಣದಿಂದಲೇ ಇಡೀ ದೇಶದಲ್ಲಿ ಕಾಂಗ್ರೆಸ್ ಮಣ್ಣುಪಾಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : – ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ – ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ