ವಿಜಯಪುರ ( VIJAYAPURA ) ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನರಸಲಗಹಿ ಗ್ರಾಮದ ಜಾಫರ್ ಬೆಣ್ಣಿ ಎಂಬ ವ್ಯಕ್ತಿ ಹನುಮ ಮಾಲಾ ಧರಿಸಿ ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಿದ್ದಾರೆ.
ಕ
ನೆರೆಯ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಆಂಜನೇಯನ ಹನುಮ ಮಾಲಾ ವೃತಾಚರಣೆ ಮಾಡುವ ಮೂಲಕ ಸೋದರತೆಯನ್ನು ಸಾರಿದ್ದಾರೆ. ಹಣೆಗೆ ಗಂಧ ಇರಿಸಿ, ತಿಲಕ ಹಚ್ಚಿಕೊಂಡು, ಕೇಸರಿ ವಸ್ತ್ರ ಧರಿಸಿ, ಹನುಮ ಮಾಲಾ ದೀಕ್ಷೆ ಪಡೆದಿರುವ ಜಾಫರ್ ಬೆಣ್ಣಿ ನಮಗೆಲ್ಲಾ ಮಾದರಿಯಾಗಿದ್ದಾರೆ. ಹನುಮ ಮಾಲಾ ವ್ರತಾಚರಣೆ ಅಂಗವಾಗಿ ಜಾಫರ್ ಬೆಣ್ಣಿ ನಿತ್ಯ ಹಿಂದೂ ದೇವಾಲಯದ ಪೂಜೆಗಳಲ್ಲಿ ಭಾಗಿಯಾಗಿ, ದೇವರ ಸ್ತುತಿಗಳನ್ನು ಹಾಡುತ್ತಾರೆ. ಇದನ್ನೂ ಓದಿ : – ದಲಿತರು, ಮುಸ್ಲಿಂರನ್ನ ಉಪಮುಖ್ಯಮಂತ್ರಿ ಮಾಡ್ತೀವಿ ಎಂದ ಇಬ್ರಾಹಿಂ …!
ಕೊಪ್ಪಳ ( KOPALA ) ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಹೊರಟಿರೋ ಜಾಫರ್ ಅವರು ಅಂಜನಾದ್ರಿ ಬೆಟ್ಟದಲ್ಲಿ ಹನುಮದೇವನಿಗೆ ಪೂಜೆ ಸಲ್ಲಿಸಿ ಹನುಮ ಮಾಲಾಧಾರ ವೃತ ಮುಕ್ತಾಯ ಮಾಡೋದಾಗಿ ಮಾಹಿತಿ ನೀಡಿದ್ದಾರೆ. ಬಸವನಾಡಿನಲ್ಲಿ ಐಕ್ಯತೆ ಸಾರಿರೋ ಜಾಫರ್ ಅವರ ನಡೆಗೆ ಹಿಂದೂ ಮುಸ್ಲಿಂ ಸಮುದಾಯದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : – ಬಿಜೆಪಿಯಲ್ಲಿ ಬೊಮ್ಮಾಯಿಗೆ ಸ್ವಾತಂತ್ರ್ಯ ಇಲ್ಲ – ಸಿ.ಎಂ.ಇಬ್ರಾಹಿಂ