ವಿಜಯನಗರದ (vijayanagara ) ಸ್ಮಯೋರ್ ಕಾರ್ಖಾನೆ ಎದುರು ಗ್ರಾಮ ಪಂಚಾಯಿತಿ ಸದಸ್ಯ ದಿಢೀರನೆ ಪ್ರತಿಭಟನೆಗಿಳಿದಿದ್ದಾರೆ . ವಿಜಯನಗರ ಜಿಲ್ಲೆ ಹೊಸಪೇಟೆ ( Hoskotte ) ತಾಲೂಕಿನ ಗಾಳೆಮ್ಮನ ಗುಡಿ ಬಳಿ ಸ್ಮಯೋರ್ ಕಾರ್ಖಾನೆಯಿದೆ .
ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ಸದಸ್ಯ ಚೌಟ್ಗಿ ನಾಗರಾಜ್ ( Choutgi nagraj ) ನಿಂದ ಕಾರ್ಖಾನೆ ಬಳಿ ಪ್ರತಿಭಟನೆ ನಡೆದಿದೆ . 2014 ರಲ್ಲಿ 5.1/2 ಎಕರೆ ಭೂಮಿಯನ್ನ ಸ್ಮಯೋರ್ ಕಾರ್ಖಾನೆ ಗಾಗಿ ನಾಗರಾಜ್ ಭೂಮಿ ನೀಡಿದ್ದಾರೆ . ಕಾರ್ಖಾನೆಗೆ ಭೂಮಿ ನೀಡುವ ಸಂದರ್ಭದಲ್ಲಿ ಕಂಪನಿ ಮಾಲಿಕರು ಉದ್ಯೋಗ ನೀಡುವುದಾಗಿ ಭರವಸೆ ಕೊಟ್ಟಿದ್ದುರು . ಕಳೆದ ಎಂಟು ವರ್ಷದಿಂದೂಲು ನಮಗೆ ಉದ್ಯೋಗ ನೀಡಿಲ್ಲ ಎಂದು ಕಾರ್ಖಾನೆ ಬಳಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ . ಸ್ಮಯೋರ್ ಕಂಪನಿಯ ನಡೆಯ ಬಗ್ಗೆ ಎಲ್ಲೆಡೆ ವ್ಯಾಪಕ ಆಕ್ರೋಶ ಹರಡಿದೆ. ಕಾರ್ಖಾನೆಗೆ ಭೂಮಿ ನೀಡಿದ ರೈತನ ಅಳಲಿಗೂ ಕಂಪನಿಯ ಮಾಲಿಕರು ಸ್ಪಂದಿಸಲಿಲ್ಲ . ಇದನ್ನೂ ಓದಿ : – ನಾನೊಬ್ಬ ಹಿರಿಯನಾಗಿದ್ದು, ಬೇರೆಯವರಿಗೆ ಮಾರ್ಗದರ್ಶನ ಮಾಡುವ ಹಂತಕ್ಕೆ ಬೆಳೆದಿದ್ದೇನೆ – ಜಿ.ಟಿ ದೇವೇಗೌಡ