ಬೆಂಗಳೂರು: ಅನುದಾನ ವಿಚಾರವಾಗಿ ಬೆಳಗಾವಿ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೀನಿ. ಡಿಸಿಎಂ ಮಾಹಿತಿ ಕೇಳಿದ್ರು ಕೊಟ್ಟಿದ್ದೇನೆ.ನಮ್ಮ ಎಂಪಿಗೂ ಕೊಟ್ಟಿದ್ದೇನೆ. ಕ್ಷೇತ್ರದ ಶಾಸಕರು ಯಾರು ಅಂತ? ಮುನಿರತ್ನ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜನರು ಆಯ್ಕೆ ಮಾಡಿರೋ ಪ್ರಕಾರ ನಾನು.ಅನೈತಿಕವಾಗಿ ಯಾರಾದ್ರೂ ಇದ್ರೆ ಗೊತ್ತಿಲ್ಲ.ಸಂವಿಧಾನ ಪ್ರಕಾರ ನಾನು ಶಾಸಕ.ಅಕ್ರಮ, ಸಕ್ರಮ ಅಂತ ಇರುತ್ತೆ.ಸಕ್ರಮವಾಗಿ ನಾನು ಶಾಸಕ.ಅಕ್ರಮ ಯಾರಾದ್ರೂ ಇದ್ರೆ ಗೊತ್ತಿಲ್ಲ.ಸರ್ಕಾರದ ದಾಖಲೆಯಲ್ಲಿ ಅನೈತಿಕ ಅಂತ ಇದ್ರೆ ಅದು ಗೊತ್ತಿಲ್ಲ.ಅನೈತಿಕ ಕೂಸು ಯಾರು ನೀವೇ ಹೇಳಿ.ನಾನು ಅಕ್ರಮಾನಾ, ಸಕ್ರಮಾನಾ ನೀವೇ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಯಾರಾದ್ರೂ ಮಾತಾಡಿದ್ರೆ ನೊಟೀಸ್ ಕೊಡ್ತೀನಿ ಅಂತ ಹೇಳಿದ್ದಾರೆ.ಈಗಲಾದ್ರೂ ಎಚ್ಚೆತ್ತುಕೊಂಡಿದ್ದಾರೆ.18 ಜನ ಪರವಾಗಿದ್ರೆ, ಉಳಿದವರು ವಿರುದ್ಧವಾಗಿದ್ದಾರೆ.ಹಾಗಾಗಿ ಹೀಗೆ ಕೇಳ್ತಿದ್ದಾರೆ ಎಂದರು.
ಪ್ರಿಯಾಂಕ್ ಖರ್ಗೆ ನಾನು ಸಿಎಂ ಆಕಾಂಕ್ಷಿ ಅನ್ನೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪ್ರಿಯಾಂಕ್ ಖರ್ಗೆ ಹೇಳಿರೋದು ನ್ಯಾಯಯುತವಾಗಿದೆ.ಅವರ ತಂದ್ರೆ ಹಿಂದೆ 50 ವರ್ಷ ಸರ್ವಿಸ್ ಇದೆ.ಅದನ್ನೂ ಸೇರಿಸಿ ಕೇಳಿದ್ದಾರೆ.ತಂದೆಗೆ ಅನ್ಯಾಯ ಆಗಿದೆ, ಅವರು ಕ್ಲೈಮ್ ಮಾಡ್ತಿದ್ದಾರೆ.ಅವರು ಕೇಳಿರೋದ್ರಲ್ಲಿ ತಪ್ಪೇನಿಲ್ಲ ಎಂದರು.
ಬರ ಅಧ್ಯಯನ ವಿಚಾರವಾಗಿ ಪ್ರತಿಕ್ರಿಯೆ, ಬರ ಅಧ್ಯಯನ ಮಾಡ್ತೀವಿ.ಬರದಲ್ಲಿ ಸಿಲುಕಿರೋರಿಗೆ ಸಾಂತ್ವಾನ ಹೇಳಬೇಕು.ಪಾಪ ಸಚಿವರು ಏನು ಮಾಡ್ತಾರೆ.ಒಂದು ಕಾರು, ಕಾರಿಗೆ ಸೈರನ್.ಅಲ್ಲಿ ಹೋಗಿ ಏನು ಆಶ್ವಾಸನೆ ಕೊಡ್ತಾರೆ.ಮಾಧ್ಯಮಕ್ಕೆ ಒಂದು ಫೋಟೋ, ಒಂದು ವೀಡಿಯೋ.ಉಸ್ತುವಾರಿ ಸಚಿವರಿಗೆ ಏನು ಅಧಿಕಾರ ಇದೆ ಎಂದರು.