ಗುಲಾಂ ನಬಿ ಆಜಾದ್ (Gulam nabi azad) ರಾಜೀನಾಮೆ ದೌರ್ಭಾಗ್ಯಪೂರ್ಣ. ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಸಂಕಷ್ಟದಲ್ಲಿ ಇಲ್ಲ, ಇಡೀ ದೇಶವೇ ಕವಲು ದಾರಿಯಲ್ಲಿದೆ ಎಂದು ಬಿ.ಕೆ ಹರಿಪ್ರಸಾದ್ (Bk.Hariprasad) ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುವಂತ ರೀತಿ ನಡೆದುಕೊಳ್ಳಲಾಗುತ್ತಿದೆ.
ಇಂಥ ಪರಿಸ್ಥಿತಿ ಯಲ್ಲಿ ಆಜಾದ್ ರಾಜೀನಾಮೆ ಅವರು ಸೋಲನ್ನು ಒಪ್ಪಿಕೊಂಡಂತಾಗಿದೆ. ಗುಲಾಂ ನಬಿ ಆಜಾದ್ ಅವರಿಗೆ ಘನತೆ ಗೌರವ ತಂದುಕೊಡುವುದಿಲ್ಲ. ರಾಷ್ಟ್ರ ಹಾಗೂ ಪಕ್ಷ ಎರಡೂ ಕಷ್ಟದಲ್ಲಿ ಇರುವಾಗ ಇವರ ನಡೆ ಹೇಡಿತನ. ಯಾವುದೋ ಒಂದು ಅಜೆಂಡಾ ಇಟ್ಟುಕೊಂಡು ರಾಜೀನಾಮೆ ಕೊಟ್ಟಂತೆ ಕಾಣಿಸುತ್ತಿದೆ. ಸಾಮೂಹಿಕ ನಾಯಕತ್ವದಲ್ಲಿ ಇದ್ದಂತ ಪಕ್ಷ ನಮ್ಮದು. ೨೦೧೪ ರ ಸೋಲಿಗೆ ಗುಲಾಂ ನಬಿ ಆಜಾದ್ ಕೂಡ ಅಷ್ಟೇ ಜವಾಬ್ದಾರರು. ಅಳೋ ಗಂಡಸನ್ನು ನಂಬಬಾರದು ಅಂತಾರೆ ಹಂಗೆ ಅನಿಸುತ್ತಿದೆ ಎಂದು ಗುಲಾಂ ನಬಿ ಆಜಾದ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : – ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್