ಬೆಳಗಾವಿಯಲ್ಲೂ ಪುರಾತನ ದೇವಾಲಯ ಒಡೆದು ಮಸೀದಿ ನಿರ್ಮಾಣ – ಅಭಯ್ ಪಾಟೀಲ್

ರಾಮದೇವ ಗಲ್ಲಿಯಲ್ಲಿ ಒಂದು ಪುರಾತನ ದೇವಾಲಯ ಇದೆ. ಆ ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಾಣ ಮಾಡಿದ್ದಾರೆ. ಅದು ಮರಳಿ ದೇವಾಲಯ ಆಗಬೇಕು ಎಂಬುದು ಎಲ್ಲ ಹಿಂದೂಗಳ ಭಾವನೆಯಾಗಿದೆ ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಬೆಳಗಾವಿ ರಾಮದೇವ ಗಲ್ಲಿಯ ಹನುಮನ ಮಂದಿರದ ಪಕ್ಕದಲ್ಲಿಯೇ ಗುಡಿ ಇದೆ. ಇದರ ಬಗ್ಗೆ ಪೂರ್ಣವಾಗಿ ಪರಿಶೀಲನೆ ಮಾಡುತ್ತಿದ್ದೇನೆ. ಇನ್ನು ಕೆಲವೊಂದು ಮಾಹಿತಿಗಳು 2-3 ದಿನಗಳಲ್ಲಿ ಸಿಗಲಿದೆ. ಯಾವಾಗ ಅದನ್ನು ಕೆಡವಿ ಮಸೀದಿ ಮಾಡಿದ್ರು? ಅಲ್ಲಿ ಯಾವ ಗುಡಿ ಇತ್ತು? ಎನ್ನುವುದು ತಿಳಿಯಲಿದೆ. ಅಲ್ಲಿನ ಹಿರಿಯರು ಇದು ಪುರಾತನ ಮಂದಿರ ಎಂದು ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದ್ರು. ದೇವಸ್ಥಾನ ಸುಮಾರು ಐನೂರು ವರ್ಷದ ಹಿಂದಿನದು ಇರಬಹುದು. ಗರ್ಭಗುಡಿಗಳಿಗೆ ಬಾಗಿಲುಗಳಿವೆ. ಒಳಗೆ ಬಹಳಷ್ಟು ಚಿತ್ರಗಳನ್ನು ಕೆತ್ತಿ ತೆಗೆಯುವ ಕೆಲಸ ಆಗಿದೆ. ಹೊರಗಿನ ಒಂದು ಸೈಡ್ ನೋಡಿದರೆ ಅದು ಯಾವ ರೀತಿಯ ಕಟ್ಟಡವಾಗಿದೆ ಎಂದು ಗೊತ್ತಾಗುತ್ತದೆ. ಮಸೀದಿಯಲ್ಲಿ ಕಲ್ಲಿನ ಬಾಗಿಲುಗಳು, ಒಳಗೆ ದೊಡ್ಡ ಕಂಬಗಳಿವೆ. ಹಲಸಿ ಸೇರಿ ಬೇರೆ ದೇವಸ್ಥಾನಗಳಲ್ಲಿ ಇರುವ ಹಾಗೇ ಮಸೀದಿ ಒಳಗಡೆ ಕಂಬಗಳು ಇದ್ದಂತೆ ಮೇಲ್ನೋಟಕ್ಕೆ ಇಲ್ಲಿಯೂ ಕಾಣಿಸುತ್ತವೆ. ಇದನ್ನೂ ಓದಿ : – ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದ ಮುಖ್ಯಮಂತ್ರಿ ಚಂದ್ರು

ಹೀಗಾಗಿ ಜಿಲ್ಲಾಡಳಿತ ತ್ವರಿತವಾಗಿ ಪರಿಶೀಲನೆ ನಡೆಸಿ ಇತಿಹಾಸದಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು. ಸರ್ವೇ ಆದ ನಂತರ ನೂರಕ್ಕೆ ನೂರು ಅದು ದೇವಸ್ಥಾನ ಎನ್ನುವುದು ಖಚಿತವಾಗುತ್ತದೆ. ಅದಾದ ಬಳಿಕ ಮರಳಿ ದೇವಸ್ಥಾನ ಪುನರ್ ಸ್ಥಾಪನೆ ಆಗಬೇಕು. ಪಕ್ಕದಲ್ಲಿಯೇ ಆಂಜನೇಯ ದೇವಸ್ಥಾನವಿದೆ. ಅದು ಯಾವ ದೇವಸ್ಥಾನ ಎಂಬ ಬಗ್ಗೆ ನಾನು ಮಾಹಿತಿ ಕಲೆ ಹಾಕುತ್ತಿದ್ದೇವೆ. ಅಲ್ಲಿನ ಜನರು ಹೇಳಿದಂತೆ ನಾನು ಹೊರಗೆ ಹೋಗಿ ನೋಡಿ ಬಂದಿದ್ದೇನೆ. 80-90 ವರ್ಷದವರು ಹೇಳುತ್ತಿರುವುದು ನೂರಕ್ಕೆ ನೂರು ನಿಜವಾಗಿದೆ. ನಾವು ಮಂದಿರ ಇತ್ತು ಎಂದು ಹೇಳಿದ್ದೇವೆ. ಅದನ್ನು ಜಿಲ್ಲಾಡಳಿತ ಸರ್ವೇ ಮಾಡಿ ಹೇಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : –  ಕುರುಬರ ಸಮಾವೇಶದಿಂದ ದೂರ ಉಳಿದ ಪರಮೇಶ್ವರ್ – ತುಮಕೂರು ಕಾಂಗ್ರೆಸ್ ನ ಭಿನ್ನಮತ ಬಹಿರಂಗ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!