ಬಿಜೆಪಿ ಹಾಲಿ ಶಾಸಕರೇ ಕಾಂಗ್ರೆಸ್ಸೇ (CONGRESS) ರಲು ರೆಡಿ ಇದ್ದಾರೆ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಾವೇರಿ (HAVERI) ಯಲ್ಲಿ ಸಿ.ಟಿ ರವಿ ( C.T RAVI) ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಕಾಂಗ್ರೆಸ್ ನವರು ತುದಿಗಾಲ ಮೇಲೆ ನಿಂತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಗುಜರಾತ್ ನಲ್ಲಿ 77 ಸ್ಥಾನಗಳಲ್ಲಿ ಕಾಂಗ್ರೆಸ್ ಏನು ಸಾಧನೆ ಮಾಡಿದೆ. ಉತ್ತರ ಪ್ರದೇಶದಲ್ಲಿ 2 ಸ್ಥಾನ ಗೆದ್ದಿದೆ . ಕರ್ನಾಟಕದಲ್ಲಿ ಕಾಂಗ್ರೆಸ್ ಮಹಾಭಾರತ ಶುರುವಾಗುತ್ತೆ ಎಂದು ಕಿಡಿಕಾರಿದ್ರು.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ
ನನ್ನ ಲೆಕ್ಕಾಚಾರದ ಪ್ರಕಾರ ಸಿದ್ದರಾಮಯ್ಯ ಅವರಿಗೆ ಸೇಪ್ ಜಾಗ ಎಂದರೆ ಪಾಕಿಸ್ತಾನ. ಅವರ ಮನಸ್ಥಿತಿಗೆ ಸೇಫ್ ಆಗಿರೋದು ಪಾಕಿಸ್ಥಾನವೇ. ಅಲ್ಲಿ ಮೋದಿಯವರಿಲ್ಲ, ಬೊಮ್ಮಾಯಿ (BOMMAI)ಯವರು ಇಲ್ಲ ,ಯಡಿಯೂರಪ್ಪನವರು ಇಲ್ಲ. ಅಲ್ಲಿ ಹೋದ್ರೆ ಕಾಟ ಕೊಡೋದಕ್ಕೆ ಡಿ.ಕೆ ಶಿವಕುಮಾರ್ ಇರಲ್ಲ ,ಖರ್ಗೆ ಇರಲ್ಲ. ಹೀಗಾಗಿ ಪಾಕಿಸ್ತಾನ ಸೇಫ್ ಜಾಗ. ಮೋದಿಯವರ ಆಡಳಿತ ನೋಡಿ ಕರ್ನಾಟಕದಲ್ಲಿಯೂ ಬಿಜೆಪಿ ಗೆಲ್ಲುತ್ತೆ ಅನ್ನೋದು ಗೊತ್ತಿದೆ. ಮುಳುಗೋ ಹಡಗಲ್ಲಿ ಯಾರು ಇರ್ತಾರೆ? ಎಂದು ವ್ಯಂಗ್ಯವಾಡಿದ್ರು. ಇದನ್ನು ಓದಿ :- ಅಪ್ಪ, ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು ಎಲ್ಲರೂ ದೋಚಲು ಶುರು ಮಾಡಿದ್ದಾರೆ- ಮಾಧುಸ್ವಾಮಿ
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಸಿ.ಟಿ ರವಿ ವ್ಯಂಗ್ಯ
ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್ ಧ್ವನಿ. ಕಾಂಗ್ರೆಸ್ ನವರು ನಮ್ಮನ್ನು ಬೈಯೋಕೆ ಇರೋದು ಎಂದು ಪರೋಕ್ಷವಾಗಿ ಕಾಂಗ್ರೆಸ್ ನವರನ್ನು ಸಿ.ಟಿ ರವಿ ಹಂದಿಗೆ ಹೋಲಿಸಿದ್ದಾರೆ. ಪ್ರಜೆಗಳು ನಮ್ಮ ಜೊತೆ ಇರೋದಕ್ಕೆ ಕಾಂಗ್ರೆಸ್ ನವರಿಗೆ ಭಯ ಇದೆ. ಪ್ರಜೆಗಳನ್ನು ಲೂಟಿ ಮಾಡಿದ ಕಾಂಗ್ರೆಸ್ ನವರು ನಮ್ಮ ಜೊತೆ ಮಾತಾಡ್ತಾರೆ. ಹೀಗಾಗಿ ಅವರದು ಸೌಂಡು, ನಮ್ಮದು ಗ್ರೌಂಡು. ಕಾಂಗ್ರೆಸ್ ನವರು ಯಾವಾಗಲೂ ಸೌಂಡ್ ಮಾಡ್ತಾರೆ. ಮೋದಿಯವರು ಅವಪ್ಪನಾಣೆ ಪ್ರಧಾನಿ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು ಮೋದಿ ಎರಡು ಬಾರಿ ಗೆಲ್ಲಲಿಲ್ಲವಾ? ಈಗ ಅಪ್ಪನ ಬಗ್ಗೆ ನಾನು ಏನು ಹೇಳಲಿ ಎಂದು ಸಿದ್ದರಾಮಯ್ಯನವರ ಅಪ್ಪನ ಮೇಲಾಣೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ರು.
ಇದನ್ನು ಓದಿ :- ಮುಸ್ಲಿಂ ಮತ ಭೇಟೆಗೆ ಮತ್ತೊಂದು ದಾಳ ಉರುಳಿಸಿದ್ರಾ ಜನಾರ್ದನ್ ರೆಡ್ಡಿ..?