Breaking News CM ಸಿದ್ದರಾಮಯ್ಯ ಪರ ಅಶೋಕ್ ಬ್ಯಾಟಿಂಗ್.!Political NewsState News

ಬಿಜೆಪಿ ಪ್ರತಿಭಟನೆಯನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ : ಡಾ.ಜಿ. ಪರಮೇಶ್ವರ್

ಬೆಂಗಳೂರು : ಇಂದೂ ಕೂಡ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ (Home Minister Dr. G. Parameshwara) ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮದೊಂದಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಸಿಎಂ ಹಾಗೂ ನಾನೂ ಕೂಡ ಪದೇ ಪದೇ ಹೇಳ್ತಾ ಇದ್ದೀವಿ, ನಾವು ರಾಜಕೀಯವಾಗಿ ಇದನ್ನ ಉಪಯೋಗಿಸುತ್ತಿಲ್ಲ ಅದರ ಅಗತ್ಯ ಇಲ್ಲ ಕೋರ್ಟ್ ಸಮನ್ಸ್ ಹೋಗಿದೆ. ಹಾಗಾಗಿ ಕ್ರಮ ತೆಗೆದುಕೊಂಡಿದ್ದಾರೆ ಕಾನೂನು ಬಿಟ್ಟು ಏನಾದ್ರೂ ಮಾಡಿದ್ರೆ ಮಾತನಾಡಬೇಕಿತ್ತು. ಇವರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ

ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್‌ನಲ್ಲಿ ಊಟಕ್ಕೆ ಸೇರಿದ್ದೇವು ಅಷ್ಟೆ, ಬೇರೇನೂ ಇಲ್ಲ, ನೀವೇ ರಹಸ್ಯ ಸಭೆ ಅಂತ ಹಾಕ್ತಾ ಇದ್ದಿರಲ್ಲ ಚರ್ಚೆ ಮಾಡಿದ ವಿಚಾರ ನಿಮ್ಮ ಮುಂದೆ ಹೇಳಲು ಸಾಧ್ಯವಿಲ್ಲ ರಾಜಕೀಯದವರು ರಾಜಕೀಯನೇ ಮಾತಾಡೋದು, ಚುನಾವಣೆಗೂ ಮುನ್ನ ಎಸ್ ಸಿ ಎಸ್ ಟಿ ಕಾನ್ಫರೆನ್ಸ್ ಮಾಡಿದ್ದೇವು. ಅಲ್ಲಿ ನಾವು 10 ರೆಸ್ಯುಲೇಷನ್ ಮಾಡಿದ್ದೇವು ಸರ್ಕಾರ ಬಂದಾಗ ಅದನ್ನು ಬಗೆಹರಿಸುತ್ತೇವೆ. ಆ ವಿಚಾರ ಚರ್ಚೆ ಮಾಡಿದ್ದೆವು ಅಷ್ಟೆ ಎಂದಿದ್ದಾರೆ.

ಹುಬ್ಬಳ್ಳಿ ಕೇಸ್ ಓಪನ್‌ ಸಂಬಂಧಪಟ್ಟಂತೆ ವಿಚಾರವಾಗಿ ಏನು ಬೇಕಾದ್ರೂ ಕೇಳಲಿ ಕಾನೂನು ಪ್ರಕಾರ ಮಾಡಿದ್ದೇವೆ. ನಾವು ಹುಬ್ಬಳ್ಳಿ ಪೊಲೀಸರನ್ನ ಸಸ್ಪೆಂಡ್ ಮಾಡಲ್ಲ, ನಾವು ಅವತ್ತೇ ಹೇಳಿದ್ದೇನೆ. ಅವನ ಕೆಲಸ ಅವನು ಮಾಡಿದ್ದಾನೆ ಅವನೇನು ಕಾನೂನು ಉಲ್ಲಂಘನೆ ಮಾಡಿಲ್ಲ ಎಂದಿದ್ದಾರೆ.

ಬಾಬ ಬುಡನ್ ಗಿರಿ ಕೇಸ್‌ನನ್ನು ನಾವ್ಯಾಕೆ ರೀ ಓಪನ್. ಪೊಲೀಸ್ ಅಧಿಕಾರಿ ಕ್ರಮ ತೆಗೆದುಕೊಂಡ್ರೆ ತಪ್ಪಾ . ಕೋರ್ಟ್ ಸೂಚನೆ ಮೇರೆಗೆ ತನಿಖೆ ಕೈಗೊಂಡಿದ್ದಾರೆ. ಕೋರ್ಟ್‌ಗೂ ಬೆಲೆ ಇಲ್ಲ ಕಾನೂನಿಗೂ ಬೆಲೆ ಇಲ್ಲ. ಯಾರೋ ಒಂಬತ್ತು ಕೇಸ್ ಇರುವವರನ್ನ ರಕ್ಷಣೆ ಮಾಡಲು ಇವರು ಹೊರಟಿದ್ದಾರೆ. ಅವನಿಗೆ ಇಷ್ಟೊಂದು ರಕ್ಷಣೆ ಯಾಕೆ. ಬೇರೆ ಹಿಂದುಗಳು ಇಲ್ವಾ ಹಾಗಾದ್ರೆ, ನಮಗೆ ಮತ ಹಾಕಿರುವ ಪೈಕಿ ಹೆಚ್ಚಿನವರು ಹಿಂದುಗಳೆ ಅಲ್ವ ಎಂದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!